ವ್ಯಕ್ತಿತ್ವಕ್ಕೆ ಮೆರಗು ಕೊಡುವ ಅನುಭೂತಿ ಸಹಾನುಭೂತಿ

Author : ಕೆ.ಆರ್. ಶ್ರೀಧರ

Pages 108

₹ 55.00




Year of Publication: 2014
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರ ಪಾರ್ಕ್ (ಪೂರ್ವ), ಬೆಂಗಳೂರು-560001,
Phone: 0802216 1900

Synopsys

ಮನೋವೈದ್ಯ ಕೆ.ಆರ್.ಶ್ರೀಧರ ಅವರ ಕೃತಿ-ವ್ಯಕ್ತಿತ್ವಕ್ಕೆ ಮೆರಗು ಕೊಡುವ ಅನುಭೂತಿ ಸಹಾನುಭೂತಿ. ಮಾತು-ವರ್ತನೆಗಳು, ಸನ್ನಿವೇಶ-ಸಮಸ್ಯೆಗೆ ಪ್ರತಿಕ್ರಿಯೆಗಳು, ಭಾವೋದ್ವೇಗಗಳು, ಗುರಿಮುಟ್ಟಲು ಪಡುವ ಪ್ರಯತ್ನ, ಪ್ರತಿಪಾದಿಸುವ ನೈತಿಕ ಮೌಲ್ಯಗಳು ಎಲ್ಲವೂ ಒಬ್ಬ ವ್ಯಕ್ತಿಯ ವ್ಯಕ್ತಿತ್ವವೇ ಆಗಿವೆ. ಇಂತಹ ಗುಣಗಳು ವ್ಯಕ್ತಿತ್ವವನ್ನು ರೂಪಿಸುತ್ತವೆ. ನೋವು ನಲಿವುಗಳಿಗೆ ಸ್ಪಂದಿಸಿ, ಅವರು ಮಾಡುವ ತಪ್ಪುಗಳನ್ನು ಕ್ಷಮಿಸಬೇಕೇ, ಶಿಕ್ಷಿಸಬೇಕೇ ಎಂಬುದನ್ನು ನಿರ್ಧರಿಸಬೇಕು. ನಾವು ಅವರೊಡನೆ ಹೊಂದಿಕೊಂಡು ಅವರು ನಮ್ಮೊಂದಿಗೆ ಹೊಂದಿಕೊಳ್ಳಲು ಅವಕಾಶ ನೀಡಬೇಕು. ಅನುಭೂತಿಯಿಂದ ಸಹಾನುಭೂತಿ ಹುಟ್ಟುತ್ತದೆ. ದಯೆ, ಅನುಕಂಪ, ಪ್ರೀತಿ, ವಾತ್ಸಲ್ಯ, ಕ್ಷಮಾಗುಣಗಳು ಹುಟ್ಟುತ್ತವೆ. ಇವುಗಳಿಂದ ವ್ಯಕ್ತಿ-ವ್ಯಕ್ತಿಯ ನಡುವೆ, ವ್ಯಕ್ತಿ-ವ್ಯಕ್ತಿಗಳ ನಡುವಿನ ಸಂಬಂಧಗಳು ಸುಧಾರಿಸುತ್ತವೆ. ಗಟ್ಟಿಯಾಗುತ್ತವೆ. ಯಾವುದೇ ಕುಟುಂಬ, ಸಮುದಾಯ, ಸಮಾಜದಲ್ಲಿ ಶಾಂತಿ, ಸಹಬಾಳ್ವೆ, ನೆಮ್ಮದಿ, ಸಮಾಧಾನಗಳಿರಬೇಕಾದರೆ ಅನುಭೂತಿ ಬಹಳ ಮುಖ್ಯವಾಗುತ್ತದೆ. ಇಂತಹ ಸಂಗತಿಗಳನ್ನು ಚರ್ಚಿಸಿರುವ ಈ ಕೃತಿ ಮನೋವಿಕಾಸಕ್ಕೂ ನೆರವಾಗುತ್ತದೆ.

About the Author

ಕೆ.ಆರ್. ಶ್ರೀಧರ

ಡಾ. ಕೆ.ಆರ್ .  ಶ್ರೀಧರ್ ಅವರು ಮನೋವೈದ್ಯರು. ಹದಿನಾಲ್ಕು ವರ್ಷಗಳ ಸರ್ಕಾರೀ ಸೇವೆಯ ನಂತರ ಕಳೆದ ಮೂವತ್ತು ವರ್ಷಗಳಿಂದ ಶಿವಮೊಗ್ಗೆಯಲ್ಲಿ ಖಾಸಗೀ ವೈದ್ಯ ವೃತ್ತಿಯಲ್ಲಿ ನಿರತರಾಗಿದ್ದಾರೆ. 30 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ 'ಗ್ರಾಮೀಣ ಉಚಿತ ಮಾನಸಿಕ ಆರೋಗ್ಯ ಶಿಬಿರಗಳು' ಈ ಕ್ಷೇತ್ರದಲ್ಲಿ ಇವರು ಸಾಧಿಸಿದ ಒಂದು ದಾಖಲೆ. ಕಳೆದ ಹನ್ನೊಂದು ವರ್ಷಗಳಿಂದ ಇವರು  ಇತರೇ ವೈದ್ಯ ಸಮೂಹದೊಂದಿಗೆ ನಡೆಸುತ್ತಿರುವ ಕ್ಷೇಮ ಟ್ರಸ್ಟ್ (ರಿ.), 'ಒಂದು ಸಮಗ್ರ ಉಚಿತ ಆರೋಗ್ಯ ಆಪ್ತ ಸಲಹಾ ಕೇಂದ್ರ'. ಇದರ ಮೂಲಕ ಸಾರ್ವಜನಿಕರಿಗೆ ಇವರು ಹಮ್ಮಿಕೊಳ್ಳುವ ಉಚಿತ ಆರೋಗ್ಯ ಕಾರ್ಯಕ್ರಮಗಳು ಬಹಳ ಅರ್ಥಪೂರ್ಣವಾಗಿವೆ ...

READ MORE

Related Books