ಮನೋವೈದ್ಯ ಕೆ.ಆರ್. ಶ್ರೀಧರ ಅವರು ಬರೆದ ಮನೋವೈಜ್ಞಾನಿಕ ಕೃತಿ-ವೃದ್ಧಾಪ್ಯವನ್ನು ನಿಭಾಯಿಸುವುದು ಹೇಗೆ?. ಪ್ರತಿಯೊಬ್ಬರ ಜೀವನದಲ್ಲಿ ವೃದ್ಧಾಪ್ಯ ಬರುತ್ತದೆ. ಕೆಲವರು ವೃದ್ಧಾಪ್ಯಕ್ಕೆ ತಲುಪುವ ಮುನ್ನವೇ ಸಾಯುತ್ತಾರೆ; ಆ ಮಾತು ಬೇರೆ. ಆದರೆ, ವೃದ್ಧಾಪ್ಯ ಎನ್ನುವುದು ಬದುಕಿನ ಕೊನೆಯ ಘಟ್ಟ. ಇದಕ್ಕೆ ತಯಾರಿ ಮಾಡಿಕೊಳ್ಳಬೇಕು. ತಪ್ಪಿದರೆ, ನಮ್ಮ ಬದುಕು ಮತ್ತಷ್ಟು ನೋವನ್ನು ಅನುಭವಿಸಬೇಕಾಗುತ್ತದೆ. ಏಕೆಂದರೆ, ದೈಹಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ ಬದುಕು ನಲುಗಿರುತ್ತದೆ. ಇಂತಹ ಸ್ಥಿತಿಯಲ್ಲೇ ಸಮಸ್ಯೆಗಳೂ ಗುಂಪು ಗುಂಪಾಗಿ ಬರುತ್ತವೆ. ದೇಹ ಅಶಕ್ತವಾಗಿರುತ್ತದೆ. ಮನಸ್ಸೂ ಸಹ ಗಟ್ಟಿಯಾಗಿರುವುದಿಲ್ಲ. ಮಾತ್ರವಲ್ಲ; ಮಕ್ಕಳು ಸಹ ಇಂತಹ ಸ್ಥಿತಿಯಲ್ಲಿ ಚೆನ್ನಾಗಿ ನೋಡಿಕೊಳ್ಳದೇ ನಿರ್ಲಕ್ಷ್ಯ ಮಾಡುತ್ತಾರೆ, ಬಂಧುಗಳು ಸಹ ಕಡೆಗಣಿಸುತ್ತಾರೆ. ಹೀಗೆ, ವೃದ್ಧಾಪ್ಯವು ಬರೀ ಸಮಸ್ಯೆಗಳ ಘಟ್ಟವಾಗಿದೆ. ಆದ್ದರಿಂದ, ಇದನ್ನು ಎದುರಿಸಲು ಪೂರ್ವ ಸಿದ್ಧತೆ ಬೇಕು. ಇಂತಹ ಸಂಗತಿಗಳ ಕುರಿತು ಉತ್ತಮ ಮಾಹಿತಿ ನೀಡಲಾಗಿದೆ.
©2025 Book Brahma Private Limited.