ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ ಅವರ ಕೃತಿ-ಭಯ: ಇರಬೇಕೆ? ಇರಬಾರದೆ?. ಭಯ ಎಂಬುದು ಎಲ್ಲರನ್ನೂ ಕಾಡುವ ಗುಮ್ಮ. ಆದರೆ, ಅದು ನಮ್ಮ ನಿಯಂತ್ರಣದಲ್ಲಿದ್ದರೆ ಅದು ನಮ್ಮ ಬದುಕಿನುದ್ದಕ್ಕೂ ಬರಲಾರದು. ಭಯವು ತೀವ್ರವಾಗಿ ಮನೋರೋಗಕ್ಕೂ ಮೂಲ ಕಾರಣವಾಗಬಹುದು. ಭಯ ಒಂದು ಮಿತಿಯಲ್ಲಿದ್ದ ಅದು ಸಾಮಾನ್ಯ. ಅದು ತೀವ್ರತೆ ಪಡೆದುಕೊಂಡು ರೋಗಕ್ಕೆ ಪರಿವರ್ತನೆಯಾದರೆ ವ್ಯಕ್ತಿಯ ಮೇಲಿನ ನಿಯಂತ್ರಣವೂ ಸಾಧ್ಯವಾಗದು. ಇಂತಹ,ಅಂಶಗಳ ಕುರಿತು ಲೇಖಕರು ಮನೋವೈಜ್ಞಾನಿಕವಾಗಿ ವಿವರಿಸಿದ್ದು ಈ ಕೃತಿಯ ವೈಶಿಷ್ಟ್ಯ.
ಡಾ. ಸಿ.ಆರ್. ಚಂದ್ರಶೇಖರ್ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ರಾಷ್ಟ್ರೀಯ ಮನೋರೋಗ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಉಪ ಆರೋಗ್ಯ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮನೋವಿಜ್ಞಾನ ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿಯುಳ್ಳ ಹಿರಿಯ ವೈದ್ಯರು ರೋಗಿಗಳ ಶುಶ್ರೂಷೆ, ಬೋಧನೆ ಮತ್ತು ತರಬೇತಿ ನೀಡುತ್ತಿರುವುದರ ಜೊತೆಗೆ ಕಳೆದ 30 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. 150 ಕ್ಕೂ ಹೆಚ್ಚು ಮನೋವಿಜ್ಞಾನದ ಬಗ್ಗೆ ಕನ್ನಡದಲ್ಲಿ ರಚಿಸಿರುವ ಇವರ ಹಲವು ಪುಸ್ತಕಗಳು ತೆಲುಗು, ಉರ್ದು, ಗುಜರಾತಿ, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. 1000 ಕ್ಕೂ ಹೆಚ್ಚು ಪ್ರೌಢ ಲೇಖನಗಳನ್ನು ಬರೆದಿದ್ದಾರೆ. ...
READ MORE