ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ ಅವರ ಕೃತಿ-ಸುಖವಾಗಿರುವುದು ಹೇಗೆ? ಮನುಷ್ಯನು ಸುಖ-ದುಃಖದಲ್ಲಿ ಆಯ್ದುಕೊಳ್ಳುವುದು ಸುಖವನ್ನೇ. ದುಃಖವನ್ನು ಯಾರೂ ಆಯ್ಕೆ ಮಾಡಲಾರರು. ತಮ್ಮ ಬದುಕು ದುಃಖದಿಂದ ತುಂಬಿರಬೇಕು ಎಂದು ಯಾರೂ ಬಯಸಲಾರರು. ಆದರೆ, ಸುಖವಾಗಿರುವುದೂ ಒಂದು ಕಲೆ. ಬಯಸಿದಾಕ್ಷಣ ಸುಃಖವಾಗಿರಲು ಅಸಾಧ್ಯ. ಇಂತಹ ಸಂಗತಿಗಳ ಬಗ್ಗೆ ಲೇಖಕರು ಮನೋವೈಜ್ಞಾನಿಕವಾಗಿ ಸರಳವಾಗಿ ಚರ್ಚಿಸಿದ್ದು ಈ ಕೃತಿಯ ವೈಶಿಷ್ಟ್ಯ.
ಡಾ. ಸಿ.ಆರ್. ಚಂದ್ರಶೇಖರ್ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ರಾಷ್ಟ್ರೀಯ ಮನೋರೋಗ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಉಪ ಆರೋಗ್ಯ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮನೋವಿಜ್ಞಾನ ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿಯುಳ್ಳ ಹಿರಿಯ ವೈದ್ಯರು ರೋಗಿಗಳ ಶುಶ್ರೂಷೆ, ಬೋಧನೆ ಮತ್ತು ತರಬೇತಿ ನೀಡುತ್ತಿರುವುದರ ಜೊತೆಗೆ ಕಳೆದ 30 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. 150 ಕ್ಕೂ ಹೆಚ್ಚು ಮನೋವಿಜ್ಞಾನದ ಬಗ್ಗೆ ಕನ್ನಡದಲ್ಲಿ ರಚಿಸಿರುವ ಇವರ ಹಲವು ಪುಸ್ತಕಗಳು ತೆಲುಗು, ಉರ್ದು, ಗುಜರಾತಿ, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. 1000 ಕ್ಕೂ ಹೆಚ್ಚು ಪ್ರೌಢ ಲೇಖನಗಳನ್ನು ಬರೆದಿದ್ದಾರೆ. ...
READ MORE