‘ಕಾತಚಿ: ನುಡಿ-ನಡಾವಳಿ ಸಂಪುಟ ಭಾಗ-2’ ಕೃತಿಯು ಕಾ.ತ ಚಿಕ್ಕಣ್ಣ ಅವರ ಸಂಪುಟವಾಗಿದೆ. ಈ ಕೃತಿಯಲ್ಲಿ ನಿಶಬುದದೆಡೆಗೆ, ಕನ್ನಡ ಎನೆ, ಉಕ್ಕೆ ಸಾಲು, ವಧೂಟಿ, ಕಣ್ಣಂಚಿನ ನೆಳಲು ಮತ್ತು ಚದುರಂಗ ಸೇರಿದಂತೆ ಆರು ಕೃತಿಗಳ ವಿಚಾರವನ್ನು ನೀಡಲಾಗಿದೆ.
ಕೃತಿಯಲ್ಲಿನ ‘ಕನ್ನಡ ಎನೆ’ ಕುರಿತು ಲಕ್ಷ್ಮಣ ಕೊಡಸೆ ಹೀಗೆ ಹೇಳಿದ್ದಾರೆ; ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಯಾಗಿ ಮಾತ್ರವಲ್ಲದೆ ಕನ್ನಡ, ಕರ್ನಾಟಕ ಮತ್ತು ಕನ್ನಡಿಗರ ಹಿತರಕ್ಷಣೆಗೆ ಪೂರಕವಾದ ಶಾಶ್ವತ ಕಾರ್ಯಯೋಜನೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡ ಸಾಂಸ್ಕೃತಿಕ ಪರಿಚಾರಕರಾಗಿ ಚಿಕ್ಕಣ್ಣನವರ ಸೇವೆಯನ್ನು ಪರಿಗಣಿಸಲಾಗುತ್ತದೆ, ಎಂದಿದ್ದಾರೆ.
ಶಶಿಧರ್ ಭಾರಿಘಾಟ್ ಕೃತಿಯಲ್ಲಿನ ‘ಚದುರಂಗ’ ಕುರಿತು; ಪುಟದಿಂದೆದ್ದು ಬಂದ ಪಾತ್ರಗಳು ಚದುರಂಗರ ಬದುಕಿನ ಭಾಗವಾಗುವ ಸಂದರ್ಭದಲ್ಲೇ, ವರ್ತಮಾನಕ್ಕೂ ಪ್ರತಿಕ್ರಿಯಿಸುತ್ತಾ, ನಾಟಕಕ್ಕೆ ಪುರಾಣದ ಆಯಾಮವನ್ನು ನೀಡಿರುವುದು ನಾಟಕಕಾರ ಚಿಕ್ಕಣ್ಣನವರ ಕಥನ ಶಕ್ತಿಯ ವಿಶೇಷ ಗುಣ ಎಂದು ತಿಳಿಸಿದ್ದಾರೆ.
ವೀ.ಚಿ ‘ವಧೂಟಿ’ ಕುರಿತು; ಆರು ದೃಶ್ಯಗಳ ಪುಟ್ಟ ರೂಪಕದಲ್ಲಿ ಬರುವ ವಧೂಟಿ ಮತ್ತು ಕನಕರ ಸಂಬಂಧ ಯೋಗ ಯೋಗಿನಿಯರ ಸಂಬಂಧದ ಹಾಗೆ ಅಲೌಕಿಕ ಸ್ಪರ್ಶವನ್ನು ಹೊಂದಿದೆ. ಕನಕರ ಆಶಯದ ವಿಸ್ತರಣೆಯಂತೆ ವಧೂಟಿ ರೂಪಕದಲ್ಲಿ ಜನ ಸಾಮಾನ್ಯರ ಹಿತದ ಬಗ್ಗೆ ಹಂಬಲಿಸುತ್ತಾಳೆ ಎನ್ನುತ್ತಾರೆ.
ಕತೆಗಾರ-ಕಾದಂಬರಿಕಾರ ಕಾ.ತ. ಚಿಕ್ಕಣ್ಣ ಅವರು ಮೂಲತಃ ಮೈಸೂರು ಜಿಲ್ಲೆಯ ಕಾಳಮ್ಮನವರ ಕೊಪ್ಪಲು ಗ್ರಾಮದವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾಗಿ ನಿವೃತ್ತರಾಗಿರುವ ಚಿಕ್ಕಣ್ಣ ಅವರು ಸಂತಕವಿ ರಾಷ್ಟ್ರೀಯ ಅಧ್ಯಯನ ಮತ್ತು ಸಂಶೋಧನ ಸಂಸ್ಥೆಯ ಸಂಚಾಲಕರು. ನಾಲ್ಕು ಕಥಾಸಂಕಲನ, ಮೂರು ಕಾದಂಬರಿ ರಚಿಸಿದ್ದಾರೆ, ’ಮುಂಜಾವು’ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಬಂದಿದೆ. ಅವರ ’ವಧೂಟಿ’ ನಾಟಕಕ್ಕೆ ಆರ್ಯಭಟ ಪ್ರಶಸ್ತಿ ಲಭಿಸಿದೆ. ಹಲವು ಸಮಿತಿಗಳ ಸದಸ್ಯ ಕಾರ್ಯದರ್ಶಿ, ಸಂಚಾಲಕರಾಗಿ ಕಾರ್ಯನಿರ್ವಹಿಸಿರುವ ಅವರು ಪಠ್ಯ ಪುಸ್ತಕ ರಚನಾ ಸಮಿತಿಯ ಸದಸ್ಯರಾಗಿದ್ದರು. ಬಿಳಲು ಬಿಟ್ಟ ಬದುಕು, ಒಡಲುರಿ, ವಾಸನಾಮಯ ಬದುಕಿನ ಆಚೆ ಈಚೆ, ಮನಸ್ಸು ...
READ MORE