ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಶ್ರೀನಿವಾಸ) ಅವರ ಭಾವ ಸಮಗ್ರ-3 ಸಂಪುಟಗಳು-_ ಈ ಕೃತಿಯು ಶೀರ್ಷಿಕೆಯೇ ಸೂಚಿಸುವಂತೆ ಮೂರು ಕೃತಿಗಳನ್ನು ಒಳಗೊಂಡಿದೆ. `ಭಾವ‘ವು ಈ ಲೇಖಕರ ಆತ್ಮಕಥವಲ್ಲ, ಮಾಸ್ತಿಯವರ ಜನನ - ಬಾಲ್ಯ - ಕೌಮರ-ಯೌವನ, ಭಾರತವರ್ಷದ ಸ್ವಾತಂತ್ರ್ಯ ಸಂಗ್ರಾಮದ ಮುನ್ನಡೆ, ಅದಕ್ಕಾಗಿ ಹೋರಾಡಿದ ಧುರೀಣರ ಭಾಷಣಗಳು ಇತ್ಯಾದಿ ಅವರು ಸಾಕ್ಷಿಯಾಗಿದ್ದವರು. ಪೌಢ ವಿದ್ಯಾರ್ಥಿ ದಿನಗಳಲ್ಲಿ. ವೃತ್ತಿಜೀವನವು ಕ್ರಮಿಸಿದ್ದು ರಾಜರ ಆಳ್ವಿಕೆಯಲ್ಲಿಯೇ. ಶ್ರೀನಿವಾಸ‘ರ ಸಾಹಿತ್ಯ ಕೃಷಿ ನಡೆದದ್ದು ಕನ್ನಡ ಭಾಷೆಯ ಬೆಳವಣಿಗೆ-ಹೋರಾಟಕ್ಕೂ ಇವರು ಸಾಕ್ಷಿ. ಸಾಹಿತ್ಯ ಪರಿಷತ್ತಿನ ಕೆಲಸ, ಕರ್ನಾಟಕ ಏಕೀಕರಣ ಸಂದರ್ಭದ ಕರ್ತವ್ಯ ನಿರ್ವಹಣೆ- ಈ ಎಲ್ಲವುಗಳ ನಡುವೆ ಸ್ವಾತಂತ್ರ ಭಾರತ ಉದಯ, ನಾಡ ವೈಜ್ಞಾನಿಕ - ಕೈಗಾರಿಕ ಕ್ಷೇತ್ರಗಳಲ್ಲಿನ ಮುನ್ನಡೆ, ಭಾಷಾವಿವಾದ ಈ ಎಲ್ಲವನ್ನೂ ಮಾಸ್ತಿ ಕಂಡಿದ್ದಾರೆ. ಹೀಗಾಗಿ, ಇಂತಹ ಸನ್ನಿವೇಶಗಳ ಸಾಕ್ಷಿಯೂ ಆಗಿದ್ದಾರೆ.
‘ಶ್ರೀನಿವಾಸ’ ಕಾವ್ಯನಾಮದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಕನ್ನಡ ಸಣ್ಣಕತೆಗಳ ರಚನೆಗೆ ಖಚಿತ ರೂಪ ನೀಡುವುದಕ್ಕೆ ಕಾರಣರಾದ ಆದ್ಯರು. ಕೋಲಾರದ ಮಾಲೂರಿನ ಮಾಸ್ತಿ ಗ್ರಾಮದಲ್ಲಿ 1891ರ ಜೂನ್ 8ರಂದು ಜನಿಸಿದರು. ತಂದೆ ರಾಮಸ್ವಾಮಿ ಅಯ್ಯಂಗಾರ್ ತಾಯಿ ತಿರುಮಲ್ಲಮ್ಮ. ಪ್ರೌಢವಿದ್ಯಾಭ್ಯಾಸವನ್ನು ಮೈಸೂರಿನ ವೆಸ್ಲಿಯನ್ ಹೈಸ್ಕೂಲಿನಲ್ಲೂ, ಎಫ್.ಎ. ಅನ್ನು ಮಹಾರಾಜ ಕಾಲೇಜಿನಲ್ಲೂ ಮುಗಿಸಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ಮುಗಿಸಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಎಂಎ ಪದವಿ (1914) ಪಡೆದರು. ಮೈಸೂರು ಸರ್ಕಾರದ ಅಸಿಸ್ಟೆಂಟ್ ಕಮೀಷನರ್ (1914) ಆಗಿ ಕೆಲಸಕ್ಕೆ ಸೇರಿದರು. ಸರ್ ಎಂ. ವಿಶ್ವೇಶ್ವರಯ್ಯನವರ ಕೈಕೆಳಗೆ ಕೆಲಸ ಮಾಡಿದ ...
READ MORE