ಆಧುನಿಕ ಕನ್ನಡದ ಅಶ್ವಿನಿಕುಮಾರರು ಎಂದು ಟಿ.ಎಸ್. ವೆಂಕಣ್ಣಯ್ಯ ಮತ್ತು ಎ.ಆರ್.ಕೃಷ್ಣಶಾಸ್ತ್ರಿಗಳನ್ನು ಕರೆಯಲಾಗುತ್ತಿತ್ತು. ತಳುಕಿನ ವೆಂಕಣ್ಣಯ್ಯನವರು ಕುವೆಂಪು ಅವರಂತಹ ಮೇರು ಸಾಹಿತಿಗಳಿಗೆ ಗುರುಗಳಾಗಿದ್ದವರು. ವೆಂಕಣ್ಣಯ್ಯ ಅವರ ಸಾಹಿತ್ಯ ಕೃಷಿಯೂ ಗಮನಾರ್ಹ. ಆದರೆ ಅವರ ಸಾಹಿತ್ಯ ಒಟ್ಟಿಗೆ ಸಿಗುತ್ತಿರಲಿಲ್ಲ. ಅದನ್ನು ಗಮನಿಸಿದ ಹಿರಿಯ ಕವಿ ಡಾ. ಎಚ್.ಎಸ್.ವೆಂಕಟೇಶಮೂರ್ತಿ ಅವರು ವೆಂಕಣ್ಣಯ್ಯನವರ ಸಮಗ್ರ ಸಾಹಿತ್ಯವನ್ನು ಸಂಪಾದಿಸಿದ್ದಾರೆ.
ಗ್ರಂಥದಲ್ಲಿ ನಾಲ್ಕು ಭಾಗಗಳಿದ್ದು ಕನ್ನಡ ಸಾಹಿತ್ಯ ಚರಿತ್ರೆ ಮತ್ತು ಇತರ ಲೇಖನಗಳು , ಪ್ರಾಚೀನ ಸಾಹಿತ್ಯ , ಕರ್ಣಾಟ ಕಾದಂಬರೀ ಸಂಗ್ರಹ ಮತ್ತು ಹರಿಹರ ಕವಿಯ ಬಸವರಾಜದೇವರ ರಗಳೆ ಎನ್ನುವುದಾಗಿದೆ . ಇದರಲ್ಲಿ ಎರಡು ವಿಭಾಗಗಳು ಲೇಖನಗಳಾಗಿದ್ದು ಮತ್ತೆರಡು ಕಾವ್ಯ ಸಂಪಾದನೆಯದಾಗಿದೆ . ಸಂಸ್ಕೃತ ಮತ್ತು ಕನ್ನಡ ಮಹಾಕಾವ್ಯಗಳ ವಿವೇಚನೆಯ ಭಾಗ ಇಂದಿಗೂ ಮಹತ್ವ ಪಡೆದುಕೊಂಡಿದೆ.
ಕುವೆಂಪು ಅಂತಹವರನ್ನು ಕಟೆದ ಟಿಎಸ್ವಿ ಅವರ ಚಿಂತನ ಕ್ರಮ ಹೇಗಿರುತ್ತದೆ ಎಂದು ಅರಿಯಲು, ಅವರ ಬೋಧನೆಗಳ ಮೌಲ್ಯವನ್ನು ತಿಳಿಯಲು ಕೃತಿಯನ್ನು ಓದಲೇಬೇಕು.
ವೆಂಕಟೇಶ ಮೂರ್ತಿ ಅವರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಹಳ್ಳಿಯಲ್ಲಿ ಮಧ್ಯಮವರ್ಗದ ಕುಟುಂಬವೊಂದರಲ್ಲಿ 23-06-1944ರಲ್ಲಿ ಜನಿಸಿದರು. ಮೂವತ್ತು ವರ್ಷಗಳ ಕಾಲ ಗ್ರಾಮ್ಯಜೀವನ ನಡೆಸಿ ನಂತರ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ 1973ರಲ್ಲಿ ನೇಮಕಗೊಂಡರು. 2000 ರಲ್ಲಿ ನಿವೃತ್ತರಾದ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಾರಂಭದಲ್ಲಿ ಯಕ್ಷಗಾನ, ಬಯಲಾಟದಂಥ ರಂಗಪ್ರದರ್ಶನಗಳು ಇವರ ಮೇಲೆ ಗಾಢ ಪ್ರಭಾವ ಬೀರಿದವು. ಬಾಲ್ಯದಲ್ಲೇ ಕುಮಾರವ್ಯಾಸ, ಪುರಂದರ, ಲಕ್ಷ್ಮೀಶ ಮೊದಲಾದವರ ಕೃತಿಗಳ ನಿಕಟ ಸಂಪರ್ಕ ದೊರೆಯಿತು. ಮುಂದೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯ ಪರಂಪರೆಯೊಂದಿಗೆ ನಡೆಸಲಾದ ...
READ MORE