ಪೀಟರ್ ವ್ಯಾಟ್ಸನ್ ಬರೆದಿರುವ `ಐಡಿಯಾಸ್’ ಕೃತಿಯನ್ನು ಆಧರಿಸಿದ ಸಂಗ್ರಹರೂಪ. ಇದು ವಿವಿಧ ವಿದ್ವಾನ್ ಕ್ಷೇತ್ರಗಳಲ್ಲಿ ನಡೆದಿರುವ ಸಂಶೋಧನೆ, ಚರ್ಚೆಗಳನ್ನು ಆಧಾರವಾಗಿಟ್ಟುಕೊಂಡು ಆಧುನಿಕ ಮನುಷ್ಯನನ್ನು ತಿದ್ದಿ ರೂಪಿಸುವ ಆಧುನಿಕ ಮನುಷ್ಯನ ಮನಸ್ಸು ಭಾವನೆ, ಕ್ರಿಯೆ ವಿಚಾರಗಳನ್ನು ಪ್ರಭಾವಿಸಿರುವ ಸಂಗತಿಗಳನ್ನು ಕುರಿತದ್ದು. ಪಾಶ್ಚಾತ್ಯ ದೇಶಗಳಲ್ಲಿ ಆದ ಬೆಳವಣಿಗೆ ಏಶಿಯಾದ ದೇಶಗಳಲ್ಲಿ ಯಾಕೆ ಸಾಧ್ಯವಾಗಲಿಲ್ಲ, ಯಾವ ವಿಚಾರಗಳು ಸಾಮಾಜಿಕ, ರಾಜಕೀಯ, ಧಾರ್ಮಿಕ ಸಂಗತಿಗಳು ಜಗತ್ತಿನ ಪಲ್ಲಟಗಳಿಗೆ ಕಾರಣವಾಗಿದೆ ಎನ್ನುವುದರ ಚಿತ್ರಣ ಭಾರತ, ಚೀನಾ ಮತ್ತು ಮಧ್ಯಪ್ರಾಚ್ಯದ ಮುಸ್ಲಿಂ ರಾಷ್ಟ್ರಗಳು ಯುರೋಪಿಗಿಂತ ಹಲವು ಸಂಗತಿಗಳಲ್ಲಿ ಮುಂದಿದ್ದರೂ ಏಕೆ ಹಿಂದೆ ಬಿದ್ದವು ಎನ್ನುವ ಪರಿಶೀಲನೆಯನ್ನು ಭಾಷೆಯ ಉಗಮಕ್ಕಿಂತ ಮುಂಚಿನ ವಿಚಾರಗಳು, ಭಾಷೆಯ ಉಗಮ, ವಿಜ್ಞಾನ, ತತ್ವಶಾಸ್ತ್ರ ಮತ್ತು ಮಾನವಿಕಗಳ ಉಗಮ, ಇಸ್ರೇಲ್ ಮತ್ತು ಜೀಸಲ್ ಎಂಬ ಪರಿಕಲ್ಪನೆಗಳು ಸಂಸ್ಕೃತ, ವೇದಾಂತ ಹಿಂದೂ ಅಂಕಿಗಳು, ಚರ್ಚಿನ ವಿಚಾರ ನಿಯಂತ್ರಣಗಳು, ಪುನರುಜ್ಜೀವನ ಹೀಗೆ ಹಲವಾರು ವಿಚಾರಗಳನ್ನು ಒಳಗೊಂಡಿದೆ.
ಚಿಂತಾಮಣಿ ಕೊಡ್ಲೆಕೆರೆ ಅವರು 1961 ಜನವರಿ 13ರಂದು ಗೋಕರ್ಣ ಬಳಿಯ ಅಘನಾಶಿನಿ ಗ್ರಾಮದಲ್ಲಿ ಜನಿಸಿದರು. ತಂದೆ ಎಂ.ಎ. ಭಟ್ಟ. ತಾಯಿ ರಾಧೆ. ಹಿರೇಗುತ್ತಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಧಾರವಾಡದಲ್ಲಿ ಬಿಎಸ್ಸಿ ಪದವಿ ಪಡೆದರು. ತ್ರಿವೆಂಡ್ರಮ್ನಲ್ಲಿ ಟೆಲಿ ಕಮ್ಯುನಿಕೇಶನ್ಸ್ನಲ್ಲಿ ಒಂದು ವರ್ಷದ ಇಂಜಿನಿಯರಿಂಗ್ ತರಬೇತಿ ಹಾಗೂ ಬೆಂಗಳೂರಿನಲ್ಲಿ ಎಂ.ಬಿ.ಎ ಪದವಿ ಪಡೆದರು. ಬಾಲ್ಯದಿಂದಲೂ ಸಾಹಿತ್ಯಾಸಕ್ತಿ ಇದ್ದ ಕೊಡ್ಲೆಕೆರೆ ಅವರು ಮಾಸ ಪತ್ರಿಕೆಗಳಿಗೆ ಹನಿಗವನಗಳನ್ನು ಬರೆಯಲು ಆರಂಭಿಸಿದರು. ಕನ್ನಡಪ್ರಭ, ವಿಜಯಕರ್ನಾಟಕ ಸೇರಿದಂತೆ ಹಲವಾರು ಪತ್ರಿಕೆಗಳಲ್ಲಿ ಇವರು ಬರೆದ ಅಂಕಣ, ಕತೆ, ಕವನಗಳಿಗೆ ಬಹುಮಾನವನ್ನು ಪಡೆದಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ...
READ MORE