ಹಿರಿಯ ವಿಮರ್ಶಕ ಕೆ.ವಿ.ನಾರಾಯಣ ಅವರ ಸಮಗ್ರ ಬರಹಗಳ ಸರಣಿಯ ನಾಲ್ಕನೆಯ ಸಂಪುಟವಿದು. ನಾರಾಯಣ ಅವರು ಧ್ವನ್ಯಾಲೋಕ ಕುರಿತು ನಡೆಸಿದ ಸಂಶೋಧನೆಯನ್ನು ಒಳಗೊಂಡಿದೆ. ಈ ಹಿಂದೆ ಪ್ರತ್ಯೇಕ ಪುಸ್ತಕವಾಗಿ ಪ್ರಕಟವಾಗಿದ್ದ ಸಂಶೋಧನಾ ಪ್ರಬಂಧ. ಅಧ್ಯಯನದ ಉದ್ದೇಶ, ವ್ಯಾಪ್ತಿ ಮತ್ತು ಸ್ವರೂಪ ಅಧ್ಯಾಯದೊಂದಿಗೆ ಆರಂಭವಾಗುತ್ತದೆ. ಎರಡನೆಯ ಭಾಗದಲ್ಲಿ ಧ್ವನ್ಯಾಲೋಕ ಪೂರ್ವ ಕಾವ್ಯ ಮೀಮಾಂಸೆ: ಪರಿಕಲ್ಪನೆಗಳು ಮತ್ತು ವಿಕಾಸದ ಕುರಿತ ಚರ್ಚೆ ಇದೆ. ಮೂರನೆಯ ಭಾಗದಲ್ಲಿ ಧ್ವನ್ಯಾಲೋಕ: ಕೃತಿ, ಕರ್ತೃ ವಿಚಾರ, ಸ್ಫೋಟ ಮತ್ತು ಧ್ವನಿ, ಧ್ವನಿತತ್ವ ಸ್ವರೂಪ: ವಿವರಣೆ, ’ಧ್ವನ್ಯಾಲೋಕ’ದಲ್ಲಿ ಧ್ವನಿ ಮತ್ತು ಇತರ ಕಾವ್ಯ ಮೀಮಾಂಸಾ ಕಲ್ಪನೆಗಳು, ಶ್ರವ್ಯ ಮತ್ತು ದೃಶ್ಯಕಾವ್ಯಗಳ ಬಗೆಗೆ ಧ್ವನ್ಯಾಲೋಕದ ನಿಲುವುಗಳು, ಧ್ವನಿಸಿದ್ಧಾಂತ ಮತ್ತು ಇತರ ಕಲೆಗಳು: ಧ್ವನ್ಯಾಲೋಕದಲ್ಲಿ ಚರ್ಚೆ, ಧ್ವನಿ ವಿರೋಧಿ ಸಿದ್ಧಾಂತಗಳು, ಧ್ವನಿ ಸಮರ್ಥನೆ ಎಂಬ ಅಧ್ಯಾಯಗಳಲ್ಲಿ ಚರ್ಚಿಸಲಾಗಿದೆ. ನಾಲ್ಕನೆಯ ಭಾಗದಲ್ಲಿ ಧ್ವನ್ಯಾಲೋಕದ ಕಾವ್ಯತತ್ವಗಳು, ಆನಂದವರ್ಧನನ ಕಾವ್ಯ ತತ್ವಗಳು- ದೃಷ್ಟಿ ಹಾಗೂ ವೈಶಿಷ್ಟ್ಯ, ಧ್ವನ್ಯಾಲೋ- ಆಧುನಿ ಕಾವ್ಯ ಚಿಂತನೆಗಳ ಹಿನ್ನೆಲೆಯಲ್ಲಿ ಎಂಬ ಅಧ್ಯಾಯಗಳಿವೆ.
ಅನುಬಂಧದಲ್ಲಿ ಕಾವ್ಯ ಮೀಮಾಂಸಾ ಗ್ರಂಥಗಳು, ಸಂಸ್ಕೃತ, ಕನ್ನಡ ಗ್ರಂಥಗಳು ಮತ್ತು ಲೇಖನಗಳ ಪಟ್ಟಿ ನೀಡಲಾಗಿದೆ. ಕೃತಿಕಾರರ, ಕೃತಿ ಹಾಗೂ ವಿಷಯ ಸೂಚಿ ನೀಡಲಾಗಿದೆ.
ಕಂಪಲಾಪುರ ವೀರಣ್ಣ ನಾರಾಯಣ ಅವರು ಜನಿಸಿದ್ದು 1948ರಲ್ಲಿ. ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲ್ಲೂಕು ಕಂಪಲಾಪುರ. ಅಮ್ಮ ಕೆಂಚಮ್ಮ ಮತ್ತು ಅಪ್ಪ ವೀರಣ್ಣ. ಮೊದಲ ಹಂತದ ಓದು ಪುತ್ತೂರು ಮತ್ತು ತಾಲ್ಲೂಕು ಕೇಂದ್ರ ಪಿರಿಯಾಪಟ್ಟಣದಲ್ಲಿ. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿಜ್ಞಾನವನ್ನು ತೆಗೆದುಕೊಂಡು ಪಿ.ಯು.ಸಿ. ಓದಿದರು. ಇಂಜಿನಿಯರಿಂಗ್ ಮಾಡಲು ಅವಕಾಶವಿದ್ದರೂ ಎಂಜಿನಿಯರ್ ಆಗಕೂಡದೆಂದು ತೀರ್ಮಾನಿಸಿದ ಕೆ.ಎ.ಎಸ್ ಮತ್ತೆ ಮೈಸೂರಿನ ಯುವರಾಜ ಕಾಲೇಜಿನಲ್ಲಿ ವಿಜ್ಞಾನದ ಅಭ್ಯಾಸವನ್ನು ಮುಗಿಸಿದರು. ಆನಂತರದಲ್ಲಿ ಬಿ.ಎಡ್. ಮುಗಿಸಿ ಆರಂಭಿಸಿದ್ದು ಹೈಸ್ಕೂಲಿನಲ್ಲಿ ಅಧ್ಯಾಪನ. ಮುಂದಿನ ಓದಿಗಾಗಿ ಮತ್ತೆ ಬೆಂಗಳೂರಿನತ್ತ ಪಯಣ. ಆ ಹೊತ್ತಿಗೇನೆ ಸಾಹಿತ್ಯದ ಓದಿಗೂ ಬಿದ್ದು ಬರವಣಿಗೆಯಲ್ಲೂ ...
READ MORE