ಶಿಶು ಸಾಹಿತ್ಯದ ಅಗ್ರಗಣ್ಯರಾದ ಡಾ|| ಜಿ ಪಿ ರಾಜರತ್ನಂ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ 2008ರಲ್ಲಿ ಇವರ ಸಮಗ್ರ ಮಕ್ಕಳ ಸಾಹಿತ್ಯವನ್ನೂ ಏಕೀಕೃತಗೊಳಿಸಿ ಕನ್ನಡ ಸಂಸ್ಕೃತಿ ಇಲಾಖೆ ಹಾಗು ಸಾಹಿತ್ಯ ಅಕೇಡಮಿಗಳು ಒಟ್ಟು6 ಸಂಪುಟಗಳಲ್ಲಿ ಪ್ರಕಟಿಸಿದೆ . ಪುರಾಣ ಇತಿಹಾಸದ ಕಥೆಗಳು ಗಾತ್ರದಲ್ಲಿ ದೊಡ್ಡದಾಗಿರುವುದರಿಂದ 2 ಭಾಗಗಳಲ್ಲಿ ಪ್ರಕಟವಾಗಿರುತ್ತವೆ . ಅದರಲ್ಲಿ ಮೊದಲನೇ ಭಾಗದ ಪರಿಚಯ ಇವತ್ತು ಮಾಡಿಕೊಡುವ ಪ್ರಯತ್ನ ಮಾಡುತ್ತೇನೆ . 567 ಪುಟಗಳ ಈ ಬೃಹತ್ ಪುಸ್ತಕದಲ್ಲಿ , ಪುರಾಣ-ಇತಿಹಾಸಗಳಿಗೆ ಗಳಿಗೆ ಸಂಬಂಧಪಟ್ಟ 125 ಮಕ್ಕಳ ಕಥೆಗಳಿವೆ .ಇವುಗಳಲ್ಲಿ ರಾಮಾಯಣ , ಮಹಾಭಾರತ ಭಾಗವತ ಇತ್ಯಾದಿಗಳಿಗೆಲ್ಲ ಸಂಬಂಧ ಪಟ್ಟ ಕಥೆಗಳಿವೆ . ಅದರಲ್ಲೂ ಮಹಾಭಾರತಕ್ಕೆ ಸಂಬಂಧ ಪಟ್ಟಂತೆ ಲೇಖಕರು ವ್ಯಾಸ ಭಾರತ , ಭಾಸನ ಭಾರತ , ಪಂಪ ಭಾರತಗಳೆಲ್ಲದ್ದರಿಂದ ಕಥೆಗಳನ್ನು ಸಂಗ್ರಹ ಮಾಡಿದ್ದಾರೆ . ಕಥೆಗಳೆಲ್ಲವೂ ಅದ್ಭುತವಾಗಿ ನಿರೂಪಿಸಲ್ಪಟ್ಟಿವೆ . ಅದರಲ್ಲೂ ಸ್ನೇಹದ ಕಥೆಗಳು ಎನ್ನುವ ವಿಭಾಗ ನನ್ನನ್ನು ಹೆಚ್ಚು ಆಕರ್ಷಿಸಿದ್ದು ಮೊದಲ ಭಾಗದಲ್ಲಿ 11 ಹಾಗು ಎರಡನೇ ಭಾಗದಲ್ಲಿ 14 ಕಥೆಗಳಿರುತ್ತವೆ . ಮುದ್ರಾ ಮಂಜೂಷದಿಂದ ಆಯ್ದು ಕೊಳ್ಳಲಾದ ಚಂದನ ದಾಸ ಹಾಗು ಅಮಾತ್ಯ ರಾಕ್ಷಸರ ಸ್ನೇಹದ ಕಥೆ ಅದ್ಭುತವಾಗಿ ನಿರೂಪಿಸಲ್ಪಟ್ಟಿದೆ . ಅಂತೆಯೇ ಇದೇ ವಿಭಾಗದ ಮೊದಲ ಅಧ್ಯಾಯದಲ್ಲಿ ಕೃಷ್ಣ-ಕುಚೇಲರ ಹಾಗು ಕರ್ಣ ದುರ್ಯೋಧನರ ಕಥೆಗಳು ಸಹಾ ಸುಂದರವಾಗಿವೆ . ಏಕಲವ್ಯನ ಕಥೆಗಳಿಗಾಗಿಯೇ ಒಂದಿಡೀ ಭಾಗ ಮೀಸಲಿಟ್ಟಿದ್ದು ಇದರಲ್ಲಿ ಏಕಲವ್ಯನಿಗೆ ಸಂಬಂಧ ಪಟ್ಟ 9 ಕಥೆಗಳಿವೆ .
ನೀಲತ್ತಹಳ್ಳಿ ಕಸ್ತೂರಿಯವರು ಮಾಗಡಿಯಲ್ಲಿ ಸೆಪ್ಟೆಂಬರ್ 29, 1931ರಂದು ಜನಿಸಿದರು. ತಂದೆ ವೆಂಕಟಾಚಾರ್ಯ, ತಾಯಿ ಸೀತಮ್ಮ. ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಅವರಿಗೆ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಅವರೊಬ್ಬ ಉತ್ತಮ ಅನುವಾದಕರು. ಚೀನಾ ಜಪಾನ್ ಕತೆಗಳು (ಅನುವಾದ) (ಕಾದಂಬರಿ), ಇದು ಭಾರತದ ದಾರಿ (ನಾಟಕ) ರಾಜೇಂದ್ರ ಪ್ರಸಾದ್, ಡಿ.ವಿ. ಗುಂಡಪ್ಪ ಜೀವನ ಮತ್ತು ಸಾಧನೆ, ಸಿದ್ಧವನಹಳ್ಳಿ ಕೃಷ್ಣಶರ್ಮ - ವ್ಯಕ್ತಿ ಮತ್ತು ಶಕ್ತಿ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಸಂದಿದೆ. ...
READ MORE