ಡಾ. ಟಿ.ಎಲ್. ದೇವರಾಜ ಅವರು ಪ್ರಸಿದ್ಧ ಆಯುರ್ವೇದ ವೈದ್ಯರು. ಆಯುಷ್ ಉಪನಿರ್ದೇಶಕರಾಗಿ ನಿವೃತ್ತಿ ಹೊಂದಿರುವ ಟಿ.ಎಲ್. ದೇವರಾಜ್, ಆಯುರ್ವೇದಕ್ಕೆ ಸಂಬಂಧಿಸಿದಂತೆ ಸೂಕ್ತ ಮಾಹಿತಿ, ಚಿಕಿತ್ಸಾ ವಿಧಾನ, ಪಂಚಕರ್ಮ ಚಿಕಿತ್ಸಾ ಪದ್ಧತಿ, ಸಂಪೂರ್ಣ ಆರೋಗ್ಯ, ಪ್ರಸೂತಿ ತಂತ್ರ, ಸ್ತ್ರೀ ರೋಗಗಳು, ಬಾಲ ರೋಗಗಳು, ಕುಟುಂಬ ನಿಯಂತ್ರಣ ಸೇರಿದಂತೆ ಸುಮಾರು 45ಕ್ಕೂ ಅಧಿಕ ಪುಸ್ತಕಗಳನ್ನು ಬರೆದಿದ್ದಾರೆ. ಈ ಪೈಕಿ 2 ಕೃತಿಗಳು ರಷ್ಯಾ ಭಾಷೆಗೆ ಹಾಗೂ 1 ಕೃತಿಯು ಸ್ಪ್ಯಾನಿಷ್ ಭಾಷೆಗೆ ಅನುವಾದಗೊಂಡಿದೆ.
ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ. ಇವರ ವೈದ್ಯ ಸೇವೆಗೆ ರಾಷ್ಟ್ರಪತಿಗಳು ಸೇರಿದಂತೆ ರಾಜ್ಯ ಸರ್ಕಾರವು ಗೌರವಿಸಿದೆ. ಅಂತಾರಾಷ್ಟ್ರೀಯ ಸೇವೆಗಾಗಿಯೂ ಹಲವು ಪ್ರಶಸ್ತಿಗಳು ಪಡೆದಿದ್ದಾರೆ. ಬೆಂಗಳೂರಿನ ಶ್ರೀ ವೈದ್ಯನಾಥ ಆಯುರ್ವೇದ ಭವನದಲ್ಲಿ ಇವರು ಕಳೆದ 22 ವರ್ಷಗಳಿಂದ ಉಚಿತವಾಗಿ ಸಲಹೆಗಳನ್ನು ನೀಡುವ ಮೂಲಕ ರೋಗಿಗಳ ಸೇವೆ ಮಾಡುತ್ತಿದ್ದಾರೆ. ಇವರ ಬದುಕು ಬರೆಹ ಕುರಿತ ಕೃತಿ ಇದು.
ಡಾ. ಟಿ.ಎಲ್. ದೇವರಾಜ್ ಅವರು ಆಯುರ್ವೇದ ವೈದ್ಯರು. ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನ ಥೆರಣ್ಯ ಗ್ರಾಮದವರು. 1938ರ ಸೆಪ್ಟೆಂಬರ್ 22 ರಂದು ಜನನ. 1964ರಲ್ಲಿ, ಮೈಸೂರಿನಲ್ಲಿರುವ ಭಾರತೀಯ ಔಷಧ ಶಾಸ್ತ್ರಕ್ಕೆ ಸಂಬಂದಿಸಿದ ಸರ್ಕಾರಿ ಮಹಾವಿದ್ಯಾಲಯದಿಂದ ಪದವಿ ಪಡೆದರು. ಜಿಲ್ಲಾ ಸಹಾಯಕ ಆರೋಗ್ಯಾಧಿಕಾರಿಯಾಗಿ ಸೇವೆಗೆ ಸೇರಿದ 4 ವರ್ಷದ ನಂತರ, ಬನಾರಸ ವಿ.ವಿ.ದಿಂದ (1972) ಎಂ.ಡಿ. ಪದವಿ ಹಾಗೂ ಮೈಸೂರು ವಿ.ವಿ.ಯಿಂದ ಹಿಂದಿ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಬೆಂಗಳೂರಿನಲ್ಲಿಯ ಭಾರತೀಯ ಔಷಧ ಶಾಸ್ತ್ರ ಮಹಾವಿದ್ಯಾಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಅಂತಿಮವಾಗಿ ಅವರು ಆಯುಷ್ ಇಲಾಖೆಯ ಉಪನಿರ್ದೇಶಕರಾಗಿ (1996) ನಿವೃತ್ತಿ ...
READ MORE