‘ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿಜಗತ್ತು ಸಂಪುಟ-12’ ಕೆ.ಸಿ. ಶಿವಾರೆಡ್ಡಿ ಅವರ ಸಂಪಾದಕತ್ವದ ಸಾಹಸ ಸತ್ಯಕಥನಗಳ ಸಮಗ್ರ ಕೃತಿಯಾಗಿದೆ. ಪ್ಯಾಪಿಲನ್-1, ಪ್ಯಾಪಿಲನ್-2, ಪ್ಯಾಪಿಲನ್-3 ವಿಭಾಗಗಳನ್ನಾಗಿ ವಿಗಂಡಿಸಲಾಗಿದೆ. ಪ್ಯಾಪಿಲನ್-1 ರಲ್ಲಿ 26 ಅಕ್ಟೋಬರ್ 1931, ಒಂದು-ಎರಡು-ಮೂರು, ತಾಯ್ನಾಡಿಗೆ ವಿದಾಯ, ಅಪ್ಸರೆಯಂಥ ಹುಡುಗ, ನತದೃಷ್ಟರ ನಡುವೆ, ಟ್ರಿನಿಡಾಡ್ ನಲ್ಲಿ, ಮಿಂಚಿನ ಓಟ, ಲಾಲಿ, ಝೊರಿಮಾ, ಬ್ಲಾಕ್ ಹೋಲ್, ಸಾವಿನೊಡನೆ ಸರಸ, ಬಾರಾಂಕ್ವಿಲ್ಲಾ ವ್ಯರ್ಥಸಾಹಸ, ನರಭಕ್ಷಕರು, ಏಕಾಂತ ಶಿಕ್ಷೆ, ಜಂಗಲ್ ರಾಜ್ಯ ವಿಚಾರಗಳನ್ನು ಒಳಗೊಂಡಿದೆ.
ಪ್ಯಾಪಿಲನ್-2 ವಿಭಾಗದಲ್ಲಿ ರಲ್ಲಿ ಶ್ಮಶಾನದಲ್ಲಿ ತೆಪ್ಪ, ಸೇಡಿನ ಕಿಡಿ, ಗಂಡುಗಲಿ, ಕ್ರಾಂತಿ ಶಾಂತಿ, ನಾಟಕ ರಂಗ, ಬೆಳ್ಳಂಬೆಳಗು, ಬಾಯ್ಬಿಡುವ ಭೂಮಿ, ಅರೆಬೆಂದ ಕಾಲುಗಳು, ಒಂಟಿ ಕೈ ಬಂಟನೊಡನೆ, ಎಲ್ಲಾ ಮಾಡುವುದು, ಮಾತಾಡದ ಮಾವ, ಪಾತರಗಿತ್ತಿ, ಜಾರ್ಜ್ ಟೌನಿನಿಂದ ಓಟ, ಇರಪಾ ಹಳ್ಳಿಯ ಮೀನುಗಾರರು, ಎಲ್ ಡೊರಾಡೋ ಬಂದೀಖಾನೆ, ಬಿಡುಗಡೆಯ ಘಳಿಗೆ ವಿಚಾರಗಳಿವೆ.
ಪ್ಯಾಪಿಯೋನ್-3 ವಿಭಾಗದಲ್ಲಿ ಸೆರೆಯಿಂದ ಹೊರಗೆ, ಚಿನ್ನದ ಗಣಿ, ಜೋಜೋ ಎಂಬ ಜೂಜುಕೋರ, ಮಾರಿಯಾ ಎಂಬ ಗೆಳತಿ, ಸುವರ್ಣ ಸುರಂಗ, ಬೆಳ್ಳಿ ಹಕ್ಕಿ, ಶೈತ್ಯಾಗಾರದಲ್ಲೊಂದು ಶವ, ಕ್ರಾಂತಿ- ಭ್ರಾಂತಿ, ಮತ್ತೆ ಆದಿವಾಸಿಗಳ ದೇಶದಲ್ಲಿ, ಅಪ್ಸರೆಯ ಆಗಮನ, ಅಳಿದುಳಿದ ನನ್ನವರು, ನಿಜದ ನಿಗೂಢವನ್ನರಸುತ್ತಾ, ಹಿನ್ನುಡಿಯನ್ನು ಒಳಗೊಂಡಿದೆ. ಅನುಬಂಧ ವಿಭಾಗದಲ್ಲಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ವ್ಯಕ್ತಿ ಮತ್ತು ಕೃತಿ ಪರಿಚಯ, ಚಲನಚಿತ್ರ-ಪ್ರಶಸ್ತಿಗಳು, ಅನ್ಯ ಭಾಷೆಗಳಿಗೆ ಅನುವಾದಗೊಂಡಿರುವ ಕೃತಿಗಳು, ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಕುಟುಂಬದ ವಂಶವೃಕ್ಷ, ವಿಷಯ ಸೂಚಿಯನ್ನು ಒಳಗೊಂಡಿದೆ.
ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದದಲ್ಲಿ ಸಹ ಪ್ರಾಧ್ಯಾಪಕರಾಗಿರುವ ಕೆ.ಸಿ. ಶಿವಾರೆಡ್ಡಿ ಅವರು ಆಧುನಿಕ ಗ್ರಂಥ ಸಂಪಾದನೆಯಲ್ಲಿ ಮಹತ್ವದ ಕೆಲಸ ಮಾಡಿದ್ದಾರೆ. ಕುವೆಂಪು ಅವರ ಸಮಗ್ರ ಕೃತಿಗಳ ಸಂಪಾದಕರಾಗಿ ಅವರು ಮಾಡಿರುವ ಕೆಲಸ ಅನನ್ಯವಾದದ್ದು. ರಾಷ್ಟ್ರಕವಿ ಕುವೆಂಪು ಅವರ ಸಮಗ್ರ ಕೃತಿಗಳನ್ನು 9 ಸಂಪುಟಗಳಲ್ಲಿ ಸಂಪಾದಿಸಿ ಪ್ರಕಟಿಸಿದ್ದಾರೆ. ಹಾಗೆಯೇ ಬೇಂದ್ರೆಯವರ ಕವಿತೆಗಳನ್ನು ಕುರಿತ ’ಅಂಬಿಕಾತನಯನ ನಂಬಿಕೆಯ ಹಾಡು’ ಹಾಗೂ ’ಶತಮಾನದ ಕವಿತೆ ಜೋಗಿ’ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಒಂದನೇ ನಾಗವರ್ಮನ ಕರ್ನಾಟಕ ಕಾದಂಬರಿ, ಕನಸುಗಳ ಕವಿ ಕಂಬಾರರ ಚಕೋರಿ ಒಂದು ಅಧ್ಯಯನ, ಇದು ಎಂಥಾ ಹಾಡು (ಕವಿ ...
READ MORE