‘ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿಜಗತ್ತು ಸಂಪುಟ-2’ ಕೆ.ಸಿ. ಶಿವಾರೆಡ್ಡಿ ಅವರ ಸಂಪಾದಕತ್ವದ ಸಣ್ಣ ಕಥಾಸಂಕಲನಗಳ ಸಮಗ್ರ ಕೃತಿಯಾಗಿದೆ. ಒಟ್ಟು ಏಳು ಭಾಗಗಳನ್ನು ಈ ಕೃತಿಯಲ್ಲಿ ಕಾಣಬಹುದಾಗಿದ್ದು, ಹುಲಿಯೂರಿನ ಸರಹದ್ದು, ಅಬಚೂರಿನ ಪೋಸ್ಟಾಫೀಸು, ಕಿರಗೂರಿನ ಗಯ್ಯಾಳಿಗಳು, ಪರಿಸರದ ಕಥೆ, ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು, ನೆಡೆಯುವ ಕಡ್ಡಿ! ಹಾರುವ ಎಲೆ!, ಪಾಕಕ್ರಾಂತಿ ಮತ್ತು ಇತರ ಕಥೆಗಳ ಸಂಕಲನಗಳು ಇಲ್ಲಿವೆ.
ಹುಲಿಯೂರಿನ ಸರಹದ್ದು 1962 ಕೃತಿಯಲ್ಲಿ, ಲಿಂಗ ಬಂದ, ಪಂಜ್ರೊಳ್ಳಿ ಪಿಶಾಚಿಯ ಸವಾಲು, ಗುಡುಗು ಹೇಳಿದ್ದೇನು?, ಊರ್ವಶಿ, ಹುಲಿಯೂರಿನ ಸರಹದ್ದು, ಗಾಂಧೀಜಿ ದೆಸೆಯಿಂದ, ಅಬಚೂರಿನ ಪೋಸ್ಟಾಫಿಸು ಕೃತಿಯಲ್ಲಿನ ಹೊಸ ದಿಗಂತದೆಡೆಗೆ-ಮುನ್ನುಡಿ, ಅಬಚೂರಿನ ಪೋಸ್ಟಾಫೀಸು, ಅವನತಿ, ಕುಬಿ ಮತ್ತು ಇಯಾಲ, ತುಕ್ಕೋಜಿ, ಡೇರ್ ಡೆವಿಲ್ ಮುಸ್ತಫಾ, ತಬರನ ಕಥೆ, ತ್ಯಕ್ತ, ಕಿರಗೂರಿನ ಗಯ್ಯಾಳಿಗಳು ಕೃತಿಯಲ್ಲಿ ಕಿರಗೂರಿನ ಗಯ್ಯಾಳಿಗಳು, ಕೃಷ್ಣೇಗೌಡನ ಆನೆ, ಮಾಯಾ ಮೃಗ, ರಹಸ್ಯ ವಿಶ್ವ, ಪರಿಸರದ ಕಥೆ ಕೃತಿಯಲ್ಲಿ, ಪರಿಸರದ ಕಥೆ, ಮಾನೀಟರ್, ಕಿವಿಯೊಡನೆ ಒಂದು ದಿನ, ಮಾಸ್ತಿ ಮತ್ತು ಬೈರ, ಸುಸ್ಮಿತ ಮತ್ತು ಹಕ್ಕಿಮರಿ, ಎಂಗ್ಪನ ಪುಂಗಿ, ಸಂಬಳಕ್ಕೆ ಸಿಕ್ಕಿಕೊಂಡ ದೆವ್ವ, ಕುಕ್ಕುಟ ಪಿಶಾಚ, ಕಾಳಪ್ಪನ ಕೋಬ್ರ, ಕೆರೆಯ ದಡದಲ್ಲಿ, ಗಾಡ್ಲಿ, ಮೂಲಿಕೆ ಬಳ್ಳಿಯ ಸುತ್ತ, ಪ್ಯಾರನಿಗೆ ಸೈತಾನ್ ಕಾಟ, ಅವಾಂತರದ ಸೀನಪ್ಪ, ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು ಕೃತಿಯಲ್ಲಿ ಒಂಟಿ ಹುಳು, ಏರೋಪ್ಲೇನ್ ಚಿಟ್ಟೆ, ಬಾವಲಿ, ಬಾವಲಿಗಳ ಅತೀಂದ್ರಿಯ ವಿಸ್ಮಯ, ಸೂಪರ್ ಕಂಪ್ಯೂಟರ್ ಬಾವಲಿ, ಕೀಟ ಶಿಲ್ಪಿಗಳು, ನುಂಗಲಾರದ ತುತ್ತು, ಸರ್ಪದೃಷ್ಟಿ, ಚೀಂಕ್ರ ಮೇಸ್ತ್ರಿ ಮತ್ತು ಅರಿಸ್ಟಾಟಲ್, ಹಾವು ಮೀನಿನ ಪ್ರಚಂಡ ಯಾನ, ಅಕ್ಕಮ್ಮ ಹೇಳಿದ ಕಥೆ, ಒಂದು ಝರಿಯ ಜಾಡಿನಲ್ಲಿ, ಹಲ್ಲಿಯ ಪ್ರಾಣ ಬಾಲದಲ್ಲಿ, ಮಲಬಾರ್ ಟ್ರೋಜನ್, ನಾವು ಕೊಂದ ಹಕ್ಕಿ, ಒಡಲನೂಲಿನಿಂದ, ಹಕ್ಕಿಗಳ ಹೆಜ್ಜೆ ಮೂಡದ ಹಾದಿ, ನೆಡೆಯುವ ಕಡ್ಡಿ! ಹಾರುವ ಎಲ್ಲೆ! ಕೃತಿಯಲ್ಲಿನ ಸರ್ವಾಂತರ್ಯಾಮಿ ಕೀಟಗಳು, ಅಗಣಿತ ಕೀಟ ಕೋಟಿಗಳು, ‘ಸ್ಪೀಷೀ’ ಅಥವಾ ಜಾತಿ, ಕೀಟ ಯಕ್ಷಿಣಿ ‘ರೂಪ ಪರಿವರ್ತನೆ’, ಏರೋಪ್ಲೇನ್ ಚಿಟ್ಟೆ, ಚಿರಂಜೀವಿ ಜಿರಳೆ ರಾಕ್ಷಸರು, ಬಿಸಿಲು ಕುದುರೆ ಅಥವಾ ಪ್ರೇಯಿಂಗ್ ಮ್ಯಾಂಟಿಸ್, ನಡೆಯುವ ಕಡ್ಡಿ! ಹಾರುವ ಎಲೆ!, ಭಯಾನಕ ಮಿಡತೆಗಳು, ತುತ್ತೂರಿ ಕೀಟಗಳು, ಕಾಡಿನ ನಗಾರಿ ‘ಜೀರುಂಡೆಗಳು’, ಮಿಣಕು ಹುಳುಗಳು, ಕೀಟಗಳ ರಾಸಾಯನಿಕ ಸಮರ, ಕೀಟಗಳ ರಾಸಾಯನಿಕ ಸಂವಾದ, ಹುಳುಗಳ ವಾಸ್ತುಶಿಲ್ಪ, ಪಾಕಕ್ರಾಂತಿ ಮತ್ತು ಇತರ ಕತೆಗಳು ಕೃತಿಯಲ್ಲಿನ ಪಾಕಾಕ್ರಾಂತಿ, ಕಳ್ಳನ ಕತೆ, ಸುವರ್ಣ ಸ್ವಪ್ನ, ಪಿಶಾಚಿಗಳು, ನಗು, ಮಳೆಗಾಲದ ಚಿತ್ರ, ಸಂತೆ, ಮೃತ್ಯೋರ್ಮಾ, ವನ ವರಹಾಗಳು, ಮೂಡಿಗೆರೆ ಎಂಬ ಊರು, ದನಗಳು, ಸಿತಾರ್ ವಾದ್ಯದ ಕಥೆ, ನಿರಂತರ, ಅನುಬಂಧ ವಿಭಾಗದಲ್ಲಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ವ್ಯಕ್ತಿ ಮತ್ತು ಕೃತಿ ಪರಿಚಯ, ಚಲನಚಿತ್ರ-ಪ್ರಶಸ್ತಿಗಳು, ಅನ್ಯ ಭಾಷೆಗಳಿಗೆ ಅನುವಾದಗೊಂಡಿರುವ ಕೃತಿಗಳು, ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಕುಟುಂಬದ ವಂಶವೃಕ್ಷ, ಎಲ್ಲ ಕಥೆಗಳು, ಹುಲಿಯೂರಿನ ಸರಹದ್ದು, ಪ್ರಕಾಶಕರ ಮಾತು, ಕೃತಿಸೂಚಿಯನ್ನು ಇಲ್ಲಿ ನೀಡಲಾಗಿದೆ.
ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದದಲ್ಲಿ ಸಹ ಪ್ರಾಧ್ಯಾಪಕರಾಗಿರುವ ಕೆ.ಸಿ. ಶಿವಾರೆಡ್ಡಿ ಅವರು ಆಧುನಿಕ ಗ್ರಂಥ ಸಂಪಾದನೆಯಲ್ಲಿ ಮಹತ್ವದ ಕೆಲಸ ಮಾಡಿದ್ದಾರೆ. ಕುವೆಂಪು ಅವರ ಸಮಗ್ರ ಕೃತಿಗಳ ಸಂಪಾದಕರಾಗಿ ಅವರು ಮಾಡಿರುವ ಕೆಲಸ ಅನನ್ಯವಾದದ್ದು. ರಾಷ್ಟ್ರಕವಿ ಕುವೆಂಪು ಅವರ ಸಮಗ್ರ ಕೃತಿಗಳನ್ನು 9 ಸಂಪುಟಗಳಲ್ಲಿ ಸಂಪಾದಿಸಿ ಪ್ರಕಟಿಸಿದ್ದಾರೆ. ಹಾಗೆಯೇ ಬೇಂದ್ರೆಯವರ ಕವಿತೆಗಳನ್ನು ಕುರಿತ ’ಅಂಬಿಕಾತನಯನ ನಂಬಿಕೆಯ ಹಾಡು’ ಹಾಗೂ ’ಶತಮಾನದ ಕವಿತೆ ಜೋಗಿ’ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಒಂದನೇ ನಾಗವರ್ಮನ ಕರ್ನಾಟಕ ಕಾದಂಬರಿ, ಕನಸುಗಳ ಕವಿ ಕಂಬಾರರ ಚಕೋರಿ ಒಂದು ಅಧ್ಯಯನ, ಇದು ಎಂಥಾ ಹಾಡು (ಕವಿ ...
READ MORE