ಕಾತಚಿ: ನುಡಿ-ನಡಾವಳಿ ಸಂಪುಟ ಭಾಗ-1

Author : ಕಾ.ತ.ಚಿಕ್ಕಣ್ಣ

Pages 456

₹ 500.00




Year of Publication: 2024
Published by: ಕಂಠೀರವ ಪ್ರಕಾಶನ
Address: #51, 2ನೇ ಕ್ರಾಸ್, 2ನೇ ಮೇನ್, ಕಾಳಪ್ಪ ಬಡಾವಣೆ, ಅಗ್ರಹಾರ ದಾಸರಹಳ್ಳಿ, ಮಾಗಡಿ ರಸ್ತೆ, ಬೆಂಗಳೂರು- 560079
Phone: 9480088960

Synopsys

‘ಕಾತಚಿ: ನುಡಿ-ನಡಾವಳಿ ಸಂಪುಟ ಭಾಗ-1’ ಕೃತಿಯು ಕಾ.ತ ಚಿಕ್ಕಣ್ಣ ಅವರ ಸಂಪುಟವಾಗಿದೆ. ಈ ಕೃತಿಯಲ್ಲಿ ನಿಶಬುದದೆಡೆಗೆ, ಕನ್ನಡ ಎನೆ, ಉಕ್ಕೆ ಸಾಲು, ವಧೂಟಿ, ಕಣ್ಣಂಚಿನ ನೆಳಲು ಮತ್ತು ಚದುರಂಗ ಸೇರಿದಂತೆ ಆರು ಕೃತಿಗಳ 52 ಭಾಗಗಳನ್ನು ನೀಡಲಾಗಿದೆ. ಕೃತಿ ಕುರಿತು ಚ.ಹ ರಘುನಾಥ ಅವರು ಬೆನ್ನುಡಿಯಲ್ಲಿ ಹೀಗೆ ಹೇಳಿದ್ದಾರೆ; ಕಣ್ಣಂಚಿನ ನೆಳಲು; ವ್ಯಕ್ತಿಯೊಬ್ಬರನ್ನು ಕೇಂದ್ರವಾಗಿಟ್ಟುಕೊಂಡು ಬರೆಯುವ ಬರವಣಿಗೆ, ಅದೇ ಕಾಲಕ್ಕೆ ಸಾಂಸ್ಕೃತಿಕ ನೆನಪುಗಳ ವಿಹಾರವೂ ಆಗುವ ಬಗೆ ಇಲ್ಲಿನ ವ್ಯಕ್ತಿಚಿತ್ರಗಳ ಹೊಳಪನ್ನು ಹೆಚ್ಚಿಸಿದೆ. ‘ಕಣ್ಣಂಚಿನ ನೆಳಲು’ ಸಂಕಲನದ ಲೇಖನಗಳು ಫಲಪುಷ್ಪಭರಿತ ತೋಟವೊಂದರಲ್ಲಿ ವಿಹರಿಸಿದ ಅನುಭವವನ್ನು ಓದುಗರಿಗೆ ನೀಡುವಂತಿದೆ ಎಂದಿದ್ದಾರೆ.

ಜಿ.ಎಸ್. ಆಮೂರ ಅವರು ನಿಶಬುದದೆಡೆಗೆ ಕೃತಿ ಕುರಿತು; ಕಥೆ ಕಾದಂಬರಿಗಳ ಕಲ್ಪನಾ ಪ್ರಪಂಚ ಹಾಗೂ ಚರಿತ್ರೆಯ ವಾಸ್ತವ ಪ್ರಪಂಚ ಇವುಗಳ ನಡುವಿನ ಕರುಳಿನ ಸಂಬಂಧಗಳು ಈ ಕೃತಿಯಲ್ಲಿ ಮೂಡಿಬಂದಷ್ಟು ಸ್ಪಷ್ಟವಾಗಿ ಬೇರೆ ಕಡೆ ಕಾಣಿಸಿಕೊಂಡಿಲ್ಲ. ಈ ಕೃತಿಯ ಹಿಂದಿನ ಪ್ರಯೋಗಶೀಲತೆ, ಚಿಕ್ಕಣ್ಣನವರಲ್ಲಿ ಸೃಜನಶೀಲತೆ ಎಷ್ಟು ಜಾಗೃತವಾಗಿದೆಯೆನ್ನುವುದಕ್ಕೆ ನಿದರ್ಶನವಾಗಿದೆ ಎಂದು ತಿಳಿಸಿದ್ದಾರೆ.

ಡಾ. ಆರ್. ಪೂರ್ಣಿಮಾ ಅವರು ಉಕ್ಕೆಸಾಲು ಕುರಿತು; ಉಕ್ಕೆಸಾಲು ಸಂಕಲನದ ಲೇಖನಗಳು ‘ಹಳ್ಳಿಯದೆಲ್ಲಾ ಹೊನ್ನು’ ಎಂಬ ಸಾರಾಸಗಟು ತೀರ್ಮಾನಕ್ಕೆ ಬರುವುದಿಲ್ಲ. ಹಳ್ಳಿಯ ಬದುಕಿನಲ್ಲಿ ಕಳೆದುಹೋಗುತ್ತಿರುವ ಸರಳತೆ ಮತ್ತು ನಗರದ ಬದುಕಿನಲ್ಲಿ ಹೆಚ್ಚುತ್ತಿರುವ ಸಂಕೀರ್ಣತೆ ಎರಡನ್ನೂ ಅವುಗಳ ಕಾರ್ಯಕಾರಣ ಸಂಬಂಧಗಳ ಹಿನ್ನೆಲೆಯಲ್ಲಿಯೇ ಚರ್ಚಿಸುವ ಪ್ರಾಮಾಣಿಕ ಪ್ರಯತ್ನ ಉದ್ದಕ್ಕೂ ನಡೆದಿದೆ, ಎಂದಿದ್ದಾರೆ.

About the Author

ಕಾ.ತ.ಚಿಕ್ಕಣ್ಣ
(30 May 1952)

ಕತೆಗಾರ-ಕಾದಂಬರಿಕಾರ ಕಾ.ತ. ಚಿಕ್ಕಣ್ಣ ಅವರು ಮೂಲತಃ ಮೈಸೂರು ಜಿಲ್ಲೆಯ ಕಾಳಮ್ಮನವರ ಕೊಪ್ಪಲು ಗ್ರಾಮದವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾಗಿ ನಿವೃತ್ತರಾಗಿರುವ ಚಿಕ್ಕಣ್ಣ ಅವರು ಸಂತಕವಿ ರಾಷ್ಟ್ರೀಯ ಅಧ್ಯಯನ ಮತ್ತು ಸಂಶೋಧನ ಸಂಸ್ಥೆಯ ಸಂಚಾಲಕರು. ನಾಲ್ಕು ಕಥಾಸಂಕಲನ, ಮೂರು ಕಾದಂಬರಿ ರಚಿಸಿದ್ದಾರೆ, ’ಮುಂಜಾವು’ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಬಂದಿದೆ. ಅವರ ’ವಧೂಟಿ’ ನಾಟಕಕ್ಕೆ ಆರ್ಯಭಟ ಪ್ರಶಸ್ತಿ ಲಭಿಸಿದೆ.  ಹಲವು ಸಮಿತಿಗಳ ಸದಸ್ಯ ಕಾರ್ಯದರ್ಶಿ, ಸಂಚಾಲಕರಾಗಿ ಕಾರ್ಯನಿರ್ವಹಿಸಿರುವ ಅವರು ಪಠ್ಯ ಪುಸ್ತಕ ರಚನಾ ಸಮಿತಿಯ ಸದಸ್ಯರಾಗಿದ್ದರು.  ಬಿಳಲು ಬಿಟ್ಟ ಬದುಕು, ಒಡಲುರಿ, ವಾಸನಾಮಯ ಬದುಕಿನ ಆಚೆ ಈಚೆ, ಮನಸ್ಸು ...

READ MORE

Related Books