ಪಾಶ್ಚಾತ್ಯ ಸಾಹಿತ್ಯ ಸಂಸ್ಕೃತಿಗಳ ತೌಲನಿಕ ಚಿಂತನೆಯ ಕೃತಿ ’ಕಾದಂಬರಿ ತ್ರಿವಳಿ’. ಅಭಿನವ ಪ್ರಕಾಶನದ ಶಂಕರ ಮೊಕಾಶಿ ಪುಣೇಕರ್ ಸಮಸ್ತ ಸಾಹಿತ್ಯ ಮಾಲೆಯಲ್ಲಿ ಪ್ರಕಟವಾದ ಪುಸ್ತಕ ’ ಸುಸಂಧಿ’ ವಿಮರ್ಶಕ, ಲೇಖಕ ಜಿ.ಬಿ ಹರೀಶ್ ಇದನ್ನು ಪ್ರಕಟಿಸಿದ್ದಾರೆ.
ಭಾಗ ೧ ರಲ್ಲಿ ರಸನಿಮಿಷ, ಅಭಿಸಾರಿಕೆ, ಅಭಿಮಾನ-ಅಭಿಲಾಷೆ, ಲೈಲಾ -ಮಜನು, ಹಿಂದೀ ರಾಷ್ಟ್ರೀಯ ಸೇನೆಯಲ್ಲಿ ಮಡಿದ ವೀರರು, ಸೈನಿಕನ ಮನೆಯ ನೆನಪು, ಕೊನೆಯ ನುಡಿಗಳು, ಸಂಕ್ರಾಂತಿಯ ದಿನದ ಸಂಜೆ, ಬಾಳ ಸಂಕಲೆಗಳನ್ನು ಕುರಿತು, ಶಾಕುಂತಲವನ್ನೋದಿ, ಪಯಣ, ಕನ್ನಡದ ತಂದೆಗೆ, ಹಕ್ಕಿ ಹಾರಿತಲ್ಲಾ !, ಇದಂ ನ ಮಮ, ಪರಿಕ್ಷಕ, ಸತ್ಯ, ಕಿರು-ಕುಳ, ಮರೆವು, ಮೌನರಾಜ್ಯ, ಪದಾರ್ಥ, ಕೀರ್ತಿವಧು, ಕಾವ್ಯ ಬಾಯಿ ಪ್ರಸಾದವಲ್ಲ, ಕತ್ತಲಲ್ಲಿ, ರಾಮಪಂಚಾಯತನ, ನಿಸರ್ಗ,ಕನಸಿಗನ ಮೊರೆ, ಹುಲಿಮನೆ, ಮಾಯಿಯ ಮೂರು ಮುಖಗಳು, ಬೇಸರ, ಸೊಳ್ಳೆ, ಬಡಾಯಿ, ಸೀಮಂತಿನೀಕೋಪಾಖ್ಯಾನ, ಶಿಖಂಡಿಗೆ, ತರುಣ ಲೇಖಕನಿಗೆ, ಸೋಲು, ಖೊಟ್ಟಿ ನಶೀಬಾ, ಶಾಪ- ಪರಿಹಾರ, ನಾವು ಮುಂಬೈಯ ಬಿಳಿಕಾಲರುಗಳು, ಪುಷ್ಟಿಸಾಂತ್ರದಾಯ, ಕಾವ್ಯವಲ್ಲರಿ, ಘಟಸಾಗರಿಕಂ, ಗುರುರಾಯ, ಸಂಸ್ಕೃತಿ, ಸುವರ್ಣ ಪ್ರಗಾಥ ಮುಂತಾದ ಕವನಗಳಿವೆ.
ಭಾಗ ೨ ರಲ್ಲಿ ಬಿಲಾಸಖಾನ, ಪತ್ತಲು, ಘಾಟ್ ಕೋಪರ, ಗೋಪಿ, ಗೋವಣ್ಣ ಮಡದಿ, ಪತ್ತೇದಾರ ಡೆರೆಕ್ ಡಿಸೀಝಾ, ವರ್ಗ ಮಿತ್ರರು, ಕುಂಟ ರಾಠೋಡ, ಮುಂತಾದ ಕತೆಗಳಿವೆ.
ಭಾಗ ೩ ರಲ್ಲಿ ಶ್ರೀ ಸಂಗೀತ ’ವಿಪರ್ಯಾಸ ವಿನೋದ’ವೆಂಬ ನಾಟಕವನ್ನೂ ಈ ಕೃತಿ ಒಳಗೊಂಡಿದೆ.
ಜಿ.ಬಿ ಹರೀಶ್ ಅವರು ಹೊಸ ತಲೆಮಾರಿನ ಗಂಭೀರ ವಿಮರ್ಶಕರಲ್ಲಿ ಒಬ್ಬರು. ಕನ್ನಡ ಕಾವ್ಯಗಳು, ಜೈನ, ಬೌದ್ಧ ಮತ್ತು ಶಾಸ್ತ್ರ ಸಾಹಿತ್ಯ ವಿಷಯಗಳಲ್ಲಿ ವಿಶೇಷ ಪರಿಣತಿ ಪಡೆದಿದ್ದಾರೆ. ಮೈಸೂರು ವಿ.ವಿ.ಯಿಂದ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದು ಕೊಂಡ ಇವರು ದೇವಚಂದ್ರನ ರಾಜಾವಳಿ ಕಥಾಸಾರ: ಜೈನ ಸಾಹಿತ್ಯಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಅಧ್ಯಯನ ಎಂಬ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಸಾಹಿತ್ಯ, ಕಲೆ ಮತ್ತು ತತ್ವಶಾಸ್ತ್ರ ಇವರ ಆಸಕ್ತಿಯ ಕ್ಷೇತ್ರಗಳು, ತುಮಕೂರು ವಿ.ವಿ., ಬೆಂಗಳೂರಿನ ಶೇಷಾದ್ರಿಪುರಂ ಸ್ನಾತಕೋತ್ತರ ಕೇಂದ್ರ, ಎಂ.ಇ.ಎಸ್. ಸ್ನಾತಕೋತ್ತರ ಕೇಂದ್ರ, ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ ಸೇರಿದಂತೆ ಹಲವು ...
READ MORE