ನಾಡವರ್ಗಳ್

Author : ಅಗ್ರಹಾರ ಕೃಷ್ಣಮೂರ್ತಿ

Pages 332

₹ 410.00




Year of Publication: 2024
Published by: ವರಪ್ರದ ಪ್ರಕಾಶನ
Address: ತುಮಕೂರು

Synopsys

‘ನಾಡವರ್ಗಳ್’ ಅಗ್ರಹಾರ ಕೃಷ್ಣ ಮೂರ್ತಿ ಅವರ ಕೃತಿಯಾಗಿದ್ದು, ಇಲ್ಲಿರುವ ಎಲ್ಲಾ ಬರಹಗಳೂ ಸಾಂದರ್ಭಿಕವಾದಂಥವು. ಬರಗೂರು ರಾಮಚಂದ್ರಪ್ಪ, ಡಿ ಎಸ್ ನಾಗಭೂಷಣ, ಹಾಮಾನಾ, ಜಿ ಎಸ್ ಎಸ್. ಕೆ ಜಿ ನಾಗರಾಜಪ್ಪ, ಕೆ ವಿ ತಿರುಮಲೇಶ್, ಸಿದ್ದಲಿಂಗಯ್ಯ, ಕೆ ಮರುಳಸಿದ್ದಪ್ಪ, ಸಚ್ಚಿದಾನಂದನ್, ಪ್ರಭುಶಂಕರ್, ಪೂರ್ಣಚಂದ್ರ ತೇಜಸ್ವಿ, ಜಿ ಕೆ ಗೋವಿಂದರಾವ್, ಎಂಡಿಎನ್- ಇವರೆಲ್ಲ ನಮ್ಮ ಜೀವಿತಕಾಲದಲ್ಲೇ ಇರುವವರು ಹಾಗೂ ಇದ್ದು ಹೋದವರು. ಇವರನ್ನು ಮತ್ತೊಮ್ಮೆ ತಮ್ಮ ಅನುಭವ ಕಥನದ ಮೂಲಕ, ನೆನಪುಗಳ ಮೂಲಕ ಅಗ್ರಹಾರ ಕೃಷ್ಣಮೂರ್ತಿ ಅವರು ನಿಜಕ್ಕೆ ಹತ್ತಿರವಾಗಿ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.

About the Author

ಅಗ್ರಹಾರ ಕೃಷ್ಣಮೂರ್ತಿ
(18 January 1953)

ಲೇಖಕ ಅಗ್ರಹಾರ ಕೃಷ್ಣಮೂರ್ತಿ ಅವರು 1953 ರ ಜನವರಿ 18 ರಂದು, ತುಮಕೂರು ಜಿಲ್ಲೆಯ ಜೆಟ್ಟಿ ಅಗ್ರಹಾರದಲ್ಲಿ ಜನಿಸಿದರು. ಕರ್ನಾಟಕದ ಅತ್ಯಂತ ಅಲ್ಪಸಂಖ್ಯಾತ ಜಾತಿಗಳಲ್ಲೊಂದಾದ ಜೆಟ್ಟಿ ಜನಾಂಗದ ಏಕಮಾತ್ರ ಲೇಖಕರು ಎನ್ನಬಹುದು. ಎಪ್ಪತ್ತರ ದಶಕದಲ್ಲಿ ಹಲವು ಎಳೆಯ ಲೇಖಕರನ್ನು ಬೆಳೆಸಿದ ಸಮಾಜವಾದಿ ಯುವಜನ ಸಭಾದಲ್ಲಿ ಎಂ.ಡಿ.ನಂಜುಂಡಸ್ವಾಮಿ, ಲಂಕೇಶ್, ಗೋಪಾಲಗೌಡರ  ಶಿಷ್ಯರಾಗಿದ್ದ ಅಗ್ರಹಾರ ಕೃಷ್ಣಮೂರ್ತಿ, ಬೆಂಗಳೂರಿನಲ್ಲಿ ಕನ್ನಡ ಎಂ.ಎ. ಪದವೀಧರರು. ಒಂದೆರಡು ವರ್ಷ ಕಾಶಿ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದರು. ಕೆಲವು ವರ್ಷ ಆಕಾಶವಾಣಿಯಲ್ಲಿ ಹಾಗೂ  ಬೆಂಗಳೂರಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಾದೇಶಿಕ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ತುಮಕೂರು ಜಿಲ್ಲೆಯ ಜಾನಪದ ಆಚರಣೆಯೊಂದನ್ನು ಅಧ್ಯಯನ ಮಾಡಿ ...

READ MORE

Related Books