ಅಖಂಡ ಕರ್ನಾಟಕ

Author : ಅ.ನ.ಕೃ (ಅ.ನ. ಕೃಷ್ಣರಾಯ)

Pages 113

₹ 1.00




Year of Publication: 1946
Published by: ಪ್ರಗತಿಶೀಲ ಲೇಖಕರ ಸಂಘ
Address: ಬೆಂಗಳೂರು

Synopsys

ಕರ್ನಾಟಕ ಶಿಕ್ಷಣ, ಸಾಮಾಜಿಕತೆ, ರಾಜಕೀಯ ಇತ್ಯಾದಿ ಸ್ಥಿತಿಗತಿಗಳ ಸಮಸ್ಯೆಗಳ ವಿವೇಚನೆಯೇ ಈ ಕೃತಿ-ಅಖಂಡ ಕರ್ನಾಟಕ. ಲೇಖಕ ಅ.ನ.ಕೃಷ್ಣರಾಯರು ವಿಶ್ಲೇಷಿಸಿದ್ದಾರೆ. ಲೇಖಕರು ಕನ್ನಡ ನುಡಿ ಹಾಗೂ ವಿಶ್ವವಾಣಿ ಪತ್ರಿಕೆಗಳನ್ನು ನಡೆಸುತ್ತಿದಾಗ ಕರ್ನಾಟಕದ ಸಮಗ್ರ ಸಮಸ್ಯೆ ಕುರಿತು ಬರೆಯುತ್ತಿದ್ದ ಲೇಖನಗಳ ಸಂಗ್ರಹವಿದು. ಸ್ವಾತಂತ್ಯ್ರ ಹೋರಾಟದಲ್ಲಿ ಕನ್ನಡಿಗರ ಪಾತ್ರವೂ ಮಹತ್ವದ್ದು. ಕನ್ನಡಿಗರ ಸ್ಥಾನಮಾನ, ಕರ್ನಾಟಕಕ್ಕೆ ಬೇಕಾದುದೇನು? ಬೆಳಗಾಂವಿಯ ಬಾವಲಿ, ಮಂಗಳೂರಿನ ಮಾತೃಭಾಷೆ, ಮಂಗಳೂರಿನಲ್ಲಿ ಕನ್ನಡದ ಗತಿ, ಬ್ರಿಟಿಷ್ ಕರ್ನಾಟಕ ಮತ್ತು ಮೈಸೂರು, ಕರ್ನಾಟಕ ಪ್ರಾಂತ್ಯದಲ್ಲಿ ಮೈಸೂರು, ಕನ್ನಡವೂ ಆಶ್ರಿತ ಸಂಸ್ಥಾನಗಳೂ, ಕೊಡಗು ಸಮಸ್ಯೆ ಇತ್ಯಾದಿ ಒಟ್ಟು 24 ವಿದ್ವತ್ ಪೂರ್ಣ ಲೇಖನಗಳು ಇಲ್ಲಿ ಸಂಕಲನಗೊಂಡಿವೆ.

About the Author

ಅ.ನ.ಕೃ (ಅ.ನ. ಕೃಷ್ಣರಾಯ)
(09 May 1908 - 04 July 1971)

‘ಅನಕೃ’ ಎಂದೇ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದ ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಅವರು ಹೆಸರಾಂತ ಕಾದಂಬರಿಕಾರರು. ‘ಕಾದಂಬರಿ ಸಾರ್ವಭೌಮ’ ಎನಿಸಿಕೊಂಡಿದ್ದ ಅವರು ಕನ್ನಡದ ಜನಪ್ರಿಯ ಕಾದಂಬರಿಕಾರರು. ಪ್ರಗತಿಶೀಲ ಸಾಹಿತ್ಯದ ಪ್ರಮುಖ ಲೇಖಕರು. ತಂದೆ ನರಸಿಂಗರಾವ್, ತಾಯಿ ಅನ್ನಪೂರ್ಣಮ್ಮ. 1908ರ ಮೇ 9ರಂದು ಜನಿಸಿದ ಅವರುಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಕೋಲಾರದಲ್ಲಿ ಮುಗಿಸಿದರು. ಬೆಂಗಳೂರಿನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ದೇಶೀಯ ವಿದ್ಯಾಶಾಲೆಯಲ್ಲಿ ಪಡೆದರು. ಮೆಟ್ರಿಕ್ ಓದುತ್ತಿದ್ದಾಗ ಶಾಂತಿನಿಕೇತನಕ್ಕೆ ಹೋಗಿ ಬಂದರು. ಬರಹ ಮಾಡಿಯೇ ಬದುಕಿದವರು ಅನಕೃ. ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಕಥಾಂಜಲಿ, ಬಾಂಬೆ ಕ್ರಾನಿಕಲ್, ವಿಶ್ವವಾಣಿ ಪತ್ರಿಕೆಗಳನ್ನು ...

READ MORE

Related Books