‘ಸವಣೂರು ತಾಲ್ಲೂಕು ದರ್ಶನ’ ಕೃತಿಯು ಸಿ.ಎನ್. ಪಾಟೀಲ್ ಅವರ ಲೇಖಸಂಕನವಾಗಿದೆ. ಈ ಕೃತಿಯು ನಾಡೋಜ ಮಹೇಶ ಜೋಶಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಹಾಗೂ ಲಿಂಗಯ್ಯ ಬಿ. ಹಿರೇಮಠ ಅವರ ಸಂಪಾದನೆಯಲ್ಲಿ ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಬಿಡುಗಡೆಗೊಂಡಿದೆ. ಹಾವೇರಿಯ ಜಿಲ್ಲೆಯ ಸವಣೂರು ತಾಲ್ಲೂಕು ಹಲವಾರು ವಿಶೇಷತೆಗಳಿಂದ ಕೂಡಿದೆ. ಪ್ರೇಕ್ಷಣೀಯ ಸ್ಥಳಗಳು, ಸಂಸ್ಕೃತಿಕವಾದ ಹಿನ್ನೆಲೆ, ಜನರ ಆಚಾರ ವಿಚಾರ ಹಾಗೂ ಸಾಹಿತ್ಯತ್ಮಕವಾದ ನೆಲೆಗಳಿಂದ ಕೂಡಿದ ವಿಚಾರಗಳನ್ನು ನಾವು ಇಲ್ಲಿ ಕಾಣಬಹುದಾಗಿದೆ. ಅಷ್ಟೇಅಲ್ಲದೇ ಭಾರತದಲ್ಲಿ ಎಲ್ಲೂ ಕಾಣಸಿಗಾದ ಅತ್ಯದ್ಭುತವಾದ ತ್ರಿವಳಿ ದೊಡ್ಡ ಹುಣಸೆಮರಗಳ ವಿಚಾರವನ್ನು ಕಟ್ಟಿಕೊಟ್ಟಿದ್ದಾರೆ.