ಸಂಶೋಧಕ ಡಾ. ಎಂ. ಚಿದಾನಂದ ಮೂರ್ತಿ ಅವರು ಕನ್ನಡ ನಾಡು-ನುಡಿಯ ಕುರಿತು ಬರೆದ ಕೃತಿ-ಸಿರಿಗನ್ನಡಂ ಗೆಲ್ಗೆ. ರಾ.ಹ.ದೇಶಪಾಂಡೆ ಅವರು ಮೊಟ್ಟಮೊದಲಿಗೆ ಸಿರಿಗನ್ನಡಂ ಗೆಲ್ಗೆ ಎಂದು ಉಚ್ಛರಿಸಿದವರು. ಆ ಮೂಲಕ ಕನ್ನಡಿಗರ ಅಭಿಮಾನವನ್ನು ಹೆಚ್ಚಿಸಿದವರು. ಕನ್ನಡಿಗರಿಗೆ ಒಂದು ಮಂತ್ರಸದೃಶವಾದ ಘೋಷಣೆ ನೀಡಿದವರು. ಕವಿರಾಜ ಮಾರ್ಗದಿಂದ ಹಿಡಿದು ನಂತರದ ಕನ್ನಡ ಕವಿಗಳ ಹಾಗೂ ಅವರ ಸಾಹಿತ್ಯವನ್ನು ವಿಶ್ಲೇಷಣೆ ಮಾಡಿದ ಲೇಖಕರು, ಕನ್ನಡ ನಾಡು, ಕರುನಾಡು, ಕರ್ಣಾಟ, ಕರ್ಣಾಟಕ, ಕರ್ನಾಟಕ ಹೀಗೆ ಯಾವುದೇ ರೀತಿ ಬರೆದು ಉಚ್ಛರಿಸಿದರೂ ಕನ್ನಡದ ಗೌರವ-ಹಿರಿಮೆ ಮಸುಕಾಗದು. ಇಂತಹ ಚಿಂತನೆಗಳ ಕೃತಿ ಇದು.
©2025 Book Brahma Private Limited.