ಲಿಪಿಯ ಬೆಳವಣಿಗೆಗೆ ಮತ್ತು ವಿಕಸನದ ಕುರಿತು ವಿವರಣೆ ನೀಡುವ ‘ಕನ್ನಡ ಲಿಪಿಶಾಸ್ತ್ರ’ ಕೃತಿಯನ್ನು ಎಂ.ಜಿ. ಮಂಜುನಾಥ ಹಾಗೂ ಜಿ.ಕೆ.ದೇವರಾಜಸ್ವಾಮಿ ಅವರು ಸಂಪಾದಿಸಿದ್ದಾರೆ. ಈ ಕೃತಿಯು ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಬಿಡುಗಡೆಗೊಂಡಿದೆ. ಇದರಲ್ಲಿ ವರ್ಣಮಾಲೆ ಮತ್ತು ಕಾಗುಣಿತಗಳ ಲಿಪಿ ಬಹು ಮುಖ್ಯವಾದದ್ದು. ಕನ್ನಡಿಗರಿಗೆ ಇದೊಂದು ಬಹು ಪ್ರಯೋಜನವನ್ನು ನೀಡುವ ಕೃತಿಯಾಗಿದೆ.
ಜಿ.ಕೆ. ದೇವರಾಜಸ್ವಾಮಿ ಅವರು ಕನ್ನಡ ಸಂಶೋಧನಾ ಕ್ಷೇತ್ರದಲ್ಲಿ ಗುರುತಿಸಿಕೊಂಡು ವಿಭಿನ್ನ ದೃಷ್ಠಿಕೋನದ ಮೂಲಕ ಹೊಸ ಆಯಾಮಗಳೊಂದಿಗೆ, ಹೊಸ ಹೊಸ ವಿಚಾರಗಳನ್ನು, ಅಜ್ಞಾತವಾಗಿರುವ ಸಂಗತಿಗಳನ್ನು ಹೊರತರುತ್ತಿದ್ದಾರೆ. ಸಾಹಿತ್ಯಸಂಸ್ಕೃತಿ ಮತ್ತು ಇತಿಹಾಸದ ಕೊಂಡಿಯಾಗಿ ಕೆಲಸ ಮಾಡುತ್ತಿದ್ದಾರೆ. 'ಕಳಚುರಿ ಶಾಸನಗಳು' ಬೃಹತ್ ಶಾಸನ ಸಂಪಾದನಾ ಕೃತಿ, 'ಕನ್ನಡ ಲಿಪಿ ವಿಕಾಸ', 'ಅಧಿಷ್ಠಾನ-ಬಾಯಿಪಾಠ ಪುಸ್ತಕ' ಎಂಬ ಮಹತ್ವ ಕೃತಿಗಳನ್ನು ರಚಿಸಿದ್ದಾರೆ. ...
READ MORE