ಹೇಮಾವತಿ ತೀರ

Author : ಮೊಹಮ್ಮದ್ ಅಜರುದ್ದೀನ್

Pages 100

₹ 100.00




Year of Publication: 2022
Published by: ಗಾಯತ್ರಿ ಎಂಟರ್ ಪ್ರೈಸಸ್
Address: ನಂ. 483, ಪೋರ್ಟ್ ಮೊಹಲ್ಲಾ, ಮೈಸೂರು

Synopsys

ಹೇಮಾವತಿ ತೀರ ಲೇಖಕ ಮೊಹಮ್ಮದ್ ಅಜರುದ್ದೀನ್ ಅವರ ಕ್ಷೇತ್ರ ಪರಿಚಯ ಕೃತಿ. ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳಲ್ಲಿ ತಮ್ಮ ಬರಹಗಳಿಂದ ಗಮನ ಸೆಳೆದವರು. ಅವರ ಹೇಮಾವತಿ ನದಿ ಹುಟ್ಟುವ ಜಾವಳಿಯಲ್ಲಿನ ಗಣೇಶ ದೇವಸ್ಥಾನದ ಬಗ್ಗೆ ಲೇಖನ ಓದಿದ್ದೆ. ಆದಾಗಿ ಅವರ ಪರಿಚಯವಾಗಿ ನನ್ನ ಕೆಲವು ಕೃತಿಗಳನ್ನು ಓದಲು ಅವರಿಗೆ ಕಳಿಸಿದ್ದೆ. ಅಂತೆಯೇ ಅವರು ತಮ್ಮ ನಾಲ್ಕು ಕೃತಿಗಳನ್ನು ಕಳಿಸಿದ್ದಾರೆ. ಅವುಗಳೆಂದರೆ ಲೇಖನ ವಿಹಾರ, ನನ್ನ ವಿಳಾಸ, ಸಂಜೆ ವಿಹಾರ ಮತ್ತು ಹೇಮಾವತಿ ತೀರ. ನನಗೆ ವಿಶೇಷವಾಗಿ ಹೇಮಾವತಿ ತೀರ ತಟ್ಟನೆ ಗಮನ ಸೆಳೆಯಿತು. ಈ ಕೃತಿ ವಿಶೇಷವಾಗಿ ಅಕ್ಕಿ ಹೆಬ್ಬಾಳು ಗ್ರಾಮದ ಸಾಹಿತ್ಯ ಸಾಂಸ್ಕೃತಿಕ ಅಧ್ಯಯನವಾಗಿದೆ. ಕನ್ನಡದ ಶ್ರೇಷ್ಠ ಪ್ರಬಂಧಕಾರರು ದೇವರು ಕೃತಿಯ ಕರ್ತೃ ಎ.ಎನ್.ಮೂರ್ತಿರಾವ್ ಇದೇ ಗ್ರಾಮದಲ್ಲಿ ಜನಿಸಿದವರು. ಇವರ ಅಕ್ಕಿ ಹೆಬ್ಬಾಳು ಲಿಲಿತ ಪ್ರಬಂಧದಲ್ಲಿ ನಮ್ಮೂರಿನ ದೇವರು ನರಸಿಂಹ, ಉಗ್ರ ನರಸಿಂಹನಲ್ಲ. ರಾಕ್ಷಸ ಸಂಹಾರದ ರೋಷವೆಲ್ಲ ಕಳೆದು ಲಕ್ಷ್ಮಿಯ ಸಾಮೀಪ್ಯದಿಂದ ಶಾಂತನಾಗಿ ಪ್ರಹ್ಲಾದನನ್ನು ಅನುಗ್ರಹಿಸಿ, ಅಭಯ ಹಸ್ತವನ್ನು ತೋರುತ್ತಿರುವ ಪ್ರಸನ್ನಮೂರ್ತಿ ಲಕ್ಷ್ಮಿನರಸಿಂಹ. ಭಕ್ತರು ದೇವರಿಗೆ ಬೆಳ್ಳಿಯ ಕೋರೆ ಹಲ್ಲುಗಳನ್ನೂ ಹೊರ ಬಿದ್ದಿರುವ ನಾಲಗೆಯನ್ನೂ ಮಾಡಿಸಿದ್ದಾರೆ. ಬೆಳ್ಳಿಯ ಹಲ್ಲುಗಳ ಕೆಳಗೆ ವಿಚಿತ್ರ ಬೆಳಕಿನಿಂದ ಕಣ್ಣುಗಳು ಹೊಳೆಯುತ್ತವೆ.

About the Author

ಮೊಹಮ್ಮದ್ ಅಜರುದ್ದೀನ್

ಲೇಖಕ ಮೊಹಮ್ಮದ್ ಅಜರುದ್ದೀನ್ ಅವರು ಮೂಲತಃ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದವರು. ಪ್ರಸ್ತುತ ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ  ಎಂಜನಿಯರಿಂಗ್ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೆ,  ಪ್ರಾದೇಶಿಕ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುತ್ತಿದ್ದಾರೆ. ಕೃತಿಗಳು : ಅಕ್ಕಿ-ಚುಕ್ಕಿ, ನಿಸರ್ಗ ನಾದ, ಹೆಬ್ಬೊಳಲು. ಪ್ರಶಸ್ತಿ-ಪುರಸ್ಕಾರಗಳು:  ಕಾವ್ಯಶ್ರೀ ಪ್ರಶಸ್ತಿ ...

READ MORE

Related Books