ಈ ಕೃತಿಯಲ್ಲಿ ಏಳು ಹೊಸ ಜಿಲ್ಲೆಗಳ ಪರಿಚಯ ಏಕೀಕರಣೋತ್ತರ ಕಾಲದಲ್ಲಿ ಕನ್ನಡನಾಡು ನುಡಿಗಳಿಂದ ಹೊರಗುಳಿದ ಗಡಿನಾಡ ಕನ್ನಡಿಗರು ನಡೆಸಿದ ಹೋರಾಟದ ಅಧ್ಯಯನಗಳಿದ್ದು , ಏಕೀಕರಣೋತ್ತರ ಕರ್ನಾಟಕದಲ್ಲಿ ಹೊರಗುಳಿದ ಕನ್ನಡದ ನಲೆ ಹಾಗು ಹೊರನಾಡು ಕನ್ನಡಿಗರು ಗಡಿ ರಕ್ಷಣೆಗಾಗಿ ನಡೆಸಿದತಹ ಹೋರಾಟ ಮತ್ತು ವಿಶೇಷವಾಗಿ ಕಾಸರಗೋಡು ಕೇರಳಕ್ಕೆ ಸೇರಿದಾಗಿನಿಂದ ಇಂದಿನವರೆಗೆ ನಡೆದಿರುವ ಗಡಿಚಳವಳಿಯನ್ನು ಈ ಪುಸ್ತಕದಲ್ಲಿ ಮುಖ್ಯವಾಗಿ ಪ್ರಸ್ತಾಪಿಸಲಾಗಿದೆ. ಈ ಗ್ರಂಥವು ಒಳಗೊಂಡಿರುವ ಅಧ್ಯಾಯಗಳೆಂದರೆ: ಏಕೀಕರಣೋತ್ತರ ಕರ್ನಾಟಕದಲ್ಲಿ ಹೊರಗುಳಿದ ಕನ್ನಡದ ನೆಲೆ ಹಿನ್ನೆಲೆ ,ಹೊರನಾಡಿನಲ್ಲಿ ಕನ್ನಡದ ಗಡಿಯ ರಕ್ಷಣೆಗಾಗಿ ಚಳವಳಿ ,ಕಾಸರಗೋಡು ತಾಲೂಕಿಗಾಗಿ ಹೋರಾಟ , ಗಡಿಪ್ರದೇಶಗಳ ಮೂಲಭೂತ ಸಮಸ್ಯೆಗಳು . ಗಡಿನಾಡಿನ ಬಗ್ಗೆ ಗಣ್ಯರ ಅಭಿಪ್ರಾಯಗಳು , ರಾಜ್ಯದ ಒಟ್ಟು ಜಿಲ್ಲೆಗಳು ಮತ್ತು ತಾಲ್ಲೂಕುಗಳು
ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಡಾ. ಎನ್ ಚಿನ್ನಸ್ವಾಮಿ ಸೋಸಲೆ ಅವರು ಮೈಸೂರು ಜಿಲ್ಲೆ ಟಿ. ನರಸೀಪುರ ತಾಲ್ಲೂಕಿನ ಸೋಸಲೆ ಗ್ರಾಮದವರು. 1968ರ ಮೇ 20 ರಂದು ಜನಿಸಿದರು. ಪ್ರಾಥಮಿಕ ಶಿಕ್ಷಣ ಸ್ವಗ್ರಾಮದಲ್ಲಿ ಮುಗಿಸಿ, ಪ್ರೌಢ ಶಿಕ್ಷಣದಿಂದ ಮುಂದಿನ ಓದು ಮೈಸೂರಿನಲ್ಲಿ ನಡೆಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ’ಆಧುನಿಕ ಮೈಸೂರು ಸಂಸ್ಥಾನದಲ್ಲಿ ಗ್ರಾಮೀಣಾಭಿವೃದ್ಧಿ( 1881-1940)’ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ (2001) ಪಡೆದರು. ನಮ್ಮ ಗ್ರಾಮಗಳು ಅಂದು ಇಂದು, ವಿಜಯನಗರ ಸಾಮ್ರಾಜ್ಯ ಮತ್ತು ಸಂಸ್ಥಾನ, ಭಾರತೀಯ ಸಮಾಜ ಮತ್ತು ದಲಿತರು, ಕರ್ನಾಟಕ ಚರಿತ್ರೆ ಮತ್ತು ಸಾಹಿತ್ಯ, ದಲಿತ ಚರಿತ್ರೆ ...
READ MORE