ನಾಲ್ವಡಿ ಕೃಷ್ಣರಾಜ ಒಡೆಯರು ಮತ್ತು ಆಧುನಿಕ ಮೈಸೂರು

Author : ಎಸ್. ಚಂದ್ರಶೇಖರ್

Pages 376

₹ 395.00




Year of Publication: 2024
Published by: ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು
Address: ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು 560018\n
Phone: 080- 26612991 / 26623584

Synopsys

`ನಾಲ್ವಡಿ ಕೃಷ್ಣರಾಜ ಒಡೆಯರು ಮತ್ತು ಆಧುನಿಕ ಮೈಸೂರು’ಪ್ರೊ.ಎಸ್. ಚಂದ್ರಶೇಖರ್ ಅವರ ಕೃತಿಯಾಗಿದೆ. ಈ ಪುಸ್ತಕದಲ್ಲಿನ ಸಂಶೋಧನಾತ್ಮಕ ವಿಚಾರಗಳು, ನಾಲ್ವಡಿ ಅವರ ವ್ಯಕ್ತಿತ್ವ ಮತ್ತು ಸಾಧನೆಗಳ ಕುರಿತಾಗಿ ಪ್ರಸ್ತುತ ಪ್ರಚಲಿತವಿರುವ ವಿಚಾರಗಳಿಗೆ ಇಂಬು ಕೊಡುವಂತೆ ಮತ್ತು ಮತ್ತಷ್ಟು ಮೆರಗು ನೀಡುವಂತೆ ಮಾಡುತ್ತವೆ. ಈ ಪುಸ್ತಕವು ಕನ್ನಡ ಸಾಹಿತ್ಯದ ಮತ್ತು ಇತಿಹಾಸದ ವಿದ್ಯಾರ್ಥಿಗಳಿಗೆ ಒಂದು ಅತ್ಯುತ್ತಮ ಆಕರವಾಗಲಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತಾವಧಿ ಮತ್ತು ಅದರ ಆಸುಪಾಸಿನ ಮೈಸೂರು ದೇಶದ ಚರಿತ್ರೆಯನ್ನು ಈ ಪುಸ್ತಕ ನಿರೂಪಿಸುತ್ತದೆ. ಇದು ನಾಲ್ವಡಿ ಕೃಷ್ಣರಾಜ ಒಡೆಯ‌ರ್ ಅವರನ್ನು ಕುರಿತಾದ ಬರಹ ಎಂದು ಮೊದಲ ನೋಟಕ್ಕೆ ಅನಿಸಿದರೂ ಕೇವಲ ಅವರನ್ನು ಕೇಂದ್ರದಲ್ಲಿ ಇರಿಸಿಕೊಂಡ ಬರಹವಾಗಿಲ್ಲ. ಬ್ರಿಟಿಶರು ಟಿಪ್ಪುವಿನಿಂದ ಮೈಸೂರನ್ನು ತಮ್ಮ ಅಧಿಕಾರ ವ್ಯಾಪ್ತಿಗೆ ಪಡೆದುಕೊಂಡ ಮೇಲೆ ನಡೆದ ಘಟನಾವಳಿಗಳನ್ನು ಆಧರಿಸಿ ಚಾರಿತ್ರಿಕ ಗತಿಶೀಲತೆಯಲ್ಲಿ ಹಲವು ವ್ಯಕ್ತಿಗಳು ನಿರ್ವಹಿಸಿದ ಪಾತ್ರವನ್ನು ಇಲ್ಲಿ ನಿರೂಪಿಸಲಾಗಿದೆ. ಅಂತಹ ವ್ಯಕ್ತಿಗಳಲ್ಲಿ ನಾಲ್ವಡಿಯವರೂ ಒಬ್ಬರು. ಈ ದೃಷ್ಟಿಕೋನದಿಂದ ಲೇಖಕರು ತಮ್ಮ ನಿರೂಪಣೆಗೆ ಒಂದು ಗತಿಯನ್ನು ರೂಪಿಸಿಕೊಂಡಿದ್ದಾರೆ. ಎಲ್ಲದಕ್ಕೂ ನಾಲ್ವಡಿಯವರೇ ಕಾರಣವೆಂದಾಗಲೀ ಇಲ್ಲವೇ ಅವರು ಕೇವಲ ಸಂದರ್ಭದ ಶಿಶುವಾಗಿದ್ದರೂ ಎಂದಾಗಲೀ ಎರಡೂ ಅತಿಗಳಿಗೆ ಹೋಗದೆ ತಮ್ಮ ನಿರೂಪಣೆಯನ್ನು ಕಟ್ಟಿದ್ದಾರೆ.

About the Author

ಎಸ್. ಚಂದ್ರಶೇಖರ್
(20 July 1949)

ಕರ್ನಾಟಕದ ಆಧುನಿಕ ಇತಿಹಾಸ ರಚನೆಗೆ ಸಂಬಂಧಿಸಿದಂತೆ ಪ್ರಮುಖರಾದ ಎಸ್. ಚಂದ್ರಶೇಖರ ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇತಿಹಾಸ ವಿಭಾಗದ ಪ್ರಾಧ್ಯಾಪಕರಾಗಿದ್ದರು. ಕಲಬುರ್ಗಿ ಕೇಂದ್ರೀಯ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ ಆಗಿದ್ದ ಅವರು ಸದ್ಯ ನಿವೃತ್ತರಾಗಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಅತಿಥಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ...

READ MORE

Related Books