‘ಹಾವೇರಿ ಜಿಲ್ಲಾ ಸಾಧಕರ ಮಾಲೆ 20’ ಕೃತಿಯು ಪುಷ್ರಾವತಿ ಶಲವಡಿಮಠ, ಶಿವಬಸಯ್ಯ ಆರಾಧ್ಯಮಠ, ಸುನೀತಾ ಹಜಾರಿ, ಚೆನ್ನವೀರ ಮಹಾಸ್ವಾಮೀಜಿಯವರ ಸಂಕಲನವಾಗಿದೆ. ಕೃತಿಯು ಶಿವಬಸವ ಮಹಾಸ್ವಾಮಿಜಿಗಳು, ಸಿಂದಗಿ ಸ್ರೀ ಶಾಂತವೀರ ಪಟ್ಟಾಧ್ಯಕ್ಷರು, ಸಂಭನನಂದಿ ಮುನಿ ಮಹಾರಾಜರು, ನಿರಂಜನ ಮಹಾಸ್ವಾಮಿಜಿಗಳ ಕುರಿತ ವಿಚಾರಗಳನ್ನು ಒಳಗೊಂಡಿದೆ. ನಾಡೋಜ ಮಹೇಶ ಜೋಶಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಹಾಗೂ ಲಿಂಗಯ್ಯ ಬಿ. ಹಿರೇಮಠ ಅವರ ಸಂಪಾದನೆಯಲ್ಲಿ ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಈ ಕೃತಿಯು ಬಿಡುಗಡೆಗೊಂಡಿದೆ.