`ಐತಿಹಾಸಿಕ ಬೆಂಗಳೂರು' ಡಾ. ಎಚ್. ಎಸ್. ಗೋಪಾಲರಾವ್ ಅವರ ಕೃತಿಯಾಗಿದ್ದು, ಪ್ರಸ್ತುತ ಕೃತಿಯು ಇತಿಹಾಸ ಪೂರ್ವಕಾಲದಿಂದ ಕರ್ನಾಟಕದ ಏಕೀಕರಣದವರಿಗೆ ಬೆಂಗಳೂರಿನ ಇತಿಹಾಸವನ್ನು ಕಟ್ಟಿಕೊಡುತ್ತದೆ. ನಾಡಿನ ಹಿರಿಯ- ಕಿರಿಯ ಇತಿಹಾಸಕಾರರಾದ ಡಾ. ಎಚ್.ಎಸ್. ಗೋಪಾಲರಾವ್, ಡಾ. ಎಸ್. ಕೆ. ಅರುಣಿ, ಡಾ. ದೇವರಕೊಂಡಾರೆಡ್ಡಿ, ಡಾ. ಹಂ.ಗು. ರಾಜೇಶ್, ಡಾ.ಕೆ.ಜಿ. ಗೋಪಾಲಕೃಷ್ಣರಾವ್, ಡಾ. ಆರ್ ಕಾವಲಮ್ಮ, ಡಾ. ಸಿ.ಚಂದ್ರಪ್ಪ ಹಾಗೂ ಡಾ. ಬಿ. ಪಾಂಡುಕುಮಾರ್ ಅವರುಗಳ ಎಂಟು ವಿದ್ವತ್ತೂರ್ಣ ಲೇಖನಗಳನ್ನು ಕೃತಿಯು ಒಳಗೊಂಡಿದೆ. ಬೆಂಗಳೂರಿನ ಇತಿಹಾಸವನ್ನು ಮತ್ತಷ್ಟು ಸುಸ್ಪಷ್ಟವಾಗಿ ಅರಿಯಲು ಈ ಕೃತಿಯನ್ನು ಇತಿಹಾಸ ಆಸಕ್ತರಿಗೆ, ವಿದ್ಯಾರ್ಥಿಗಳಿಗೆ ಅಲ್ಲದೆ, ನಾಡಿನ ಜನತೆಗೆ ನೆರವಾಗಬಲ್ಲದು.
ಡಾ. ಎಚ್.ಎಸ್. ಗೋಪಾಲರಾವ್ ಅವರು 1946ರ ನವೆಂಬರ್ 18ರಂದು ನೆಲಮಂಗಲ ತಾಲ್ಲೂಕಿನ ಹುಲ್ಲೇಗೌಡನ ಹಳ್ಳಿಯಲ್ಲಿ ಜನಿಸಿದರು. ಎಲೆಕ್ಟ್ರಿಕಲ್ ಇಂಜನಿಯರಿಂಗ್ ಡಿಪ್ಲೊಮ ಮುಗಿಸಿ ನಂತರ ಅವರು ಮೈಸೂರು ವಿವಿ ಕನ್ನಡ ಎಂ.ಎ. (1984- ಎರಡು ಚಿನ್ನದ ಪದಕ) ಪದವಿ ಪಡೆದರು. ಶಾಸನಗಳ ಹಿನ್ನೆಲೆಯಲ್ಲಿ ಕಲ್ಯಾಣ ಚಾಲುಕ್ಯ ದೇವಾಲಯಗಳು ಒಂದು ಸಾಂಸ್ಕೃತಿಕ ಅಧ್ಯಯನ ಕುರಿತು ಪಿಎಚ್. ಡಿ. ಪದವಿ ಪಡೆದರು. (ಮೈಸೂರು ವಿ ವಿ 1991). ಸರ್ಕಾರಿ ಕಾರ್ಯನಿರ್ವಾಹಕ ಎಂಜಿನಿಯರ್, ಕೆಪಿಟಿಸಿಎಲ್ ನಿಯಮಿತ, (ಕನ್ನಡ ಸಮನ್ವಯಾಧಿಕಾರಿಯಾಗಿ) ಕರ್ನಾಟಕ ಇತಿಹಾಸ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿಯಾಗಿ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶಾಸನ ಶಾಸ್ತ್ರ ...
READ MORE