ಗೋಕಾಕ ಚಳವಳಿ ಮತ್ತು ಕನ್ನಡ ಅಭಿವೃದ್ಧಿ

Author : ಎಂ. ಮಂಜುನಾಥ ಬಮ್ಮನಕಟ್ಟಿ

Pages 336

₹ 450.00




Year of Publication: 2024
Published by: ಧನ್ಯಾ ಪಬ್ಲಿಕೇಷನ್‌
Address: ಯಶೋಧ ಎಮ್‌ ಬಮ್ಮನಕಟ್ಟಿ ಕೆ. ಸಿ. ರಾಣಿ ರೋಡ್‌, ಗದಗ.
Phone: 9148969201

Synopsys

'ಗೋಕಾಕ ಚಳವಳಿ ಮತ್ತು ಕನ್ನಡ ಅಭಿವೃದ್ಧಿ' ಡಾ. ಮಂಜುನಾಥ ಬಮ್ಮನಕಟ್ಟಿ ಅವರ ಪಿಎಚ್. ಡಿ. ಪದವಿಯ ಸಂಶೋಧನಾ ಕೃತಿ. ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಡಾ.ರಾಮಕೃಷ್ಣ ಮರಾಠ ಅವರ ಮಾರ್ಗದರ್ಶನದಲ್ಲಿ ನಡೆಸಿದ ಈ ಅಧ್ಯಯನಕ್ಕೆ ಅವರಿಗೆ ಡಾಕ್ಟರೇಟ್ ಪದವಿ ಸಿಕ್ಕಿದೆ. ಗೋಕಾಕ ಚಳವಳಿ, ಕರ್ನಾಟಕದಲ್ಲಿ ಕನ್ನಡದ ಅಳಿವು ಉಳಿವಿನ ಪ್ರಶ್ನೆಯಾಗಿದ್ದಾಗ ಉಳಿವಿಗಾಗಿ ನಡೆದ ದೊಡ್ಡ ಹೋರಾಟ ಅದಾಗಿತ್ತು. ಈ ವಿಷಯವನ್ನು ಕುರಿತು ಮಂಜುನಾಥ ಅವರು ಈ ಅಧ್ಯಯನದಲ್ಲಿ ಬಹು ದೊಡ್ಡ ಹರವು ರೂಪಿಸಿದ್ದಾರೆ. ಇದಕ್ಕಾಗಿ ಅವರು ಅನೇಕ ಆಕರಗಳನ್ನು ಆಶ್ರಯಿಸಿದ್ದಾರೆ. ಏಳು ಅಧ್ಯಾಯಗಳಲ್ಲಿ ಗೋಕಾಕ ಚಳವಳಿಯ ಆರಂಭದಿಂದ ತಮ್ಮ ಅಧ್ಯಯನದ ತುದಿಯವರೆಗಿನ ಕಾಲದ ಎಲ್ಲ ಕನ್ನಡದ ಬೆಳವಣಿಗೆಯನ್ನು ಅರ್ಥಪೂರ್ಣವಾಗಿ ವ್ಯಾಖ್ಯಾನಿಸಿದ್ದಾರೆ. ಕರ್ನಾಟಕದ ಕನ್ನಡ ಬೆಳವಣಿಗೆಯನ್ನು ತಿಳಿಯಲು ಈ ಅಧ್ಯಯನ ಸಹಕಾರಿಯಾಗಿರುತ್ತದೆ. ಕನ್ನಡ ನಾಡು ನುಡಿಯ ಜಾಗೃತಿಯ ಒಂದು ಭಾಗವಾಗಿ ಈ ಕೃತಿ ತನ್ನದೇ ಪ್ರಭಾವವನ್ನು ಬೀರುವಂಥದ್ದಾಗಿರುತ್ತದೆ. ಇದರಲ್ಲಿ ನಾಲ್ಕನೆಯ ಅಧ್ಯಾಯ ಪೂರ್ಣ ಗೋಕಾಕ ವರದಿಯನ್ನು ಕುರಿತುದಾಗಿದೆ. ಅದರ ಹಿಂದೆ ಮುಂದೆ ಶಿಕ್ಷಣ, ಅದರ ಮಾಧ್ಯಮ, ಮಾತೃಭಾಷೆ ಶಿಕ್ಷಣದ ಮಹತ್ವ ಮುಂತಾದವುಗಳನ್ನು ವ್ಯಾಪಕವಾಗಿ ಚರ್ಚಿಸಲಾಗಿದೆ.

About the Author

ಎಂ. ಮಂಜುನಾಥ ಬಮ್ಮನಕಟ್ಟಿ
(01 June 1975)

ಪತ್ರಕರ್ತ ಎಂ.ಮಂಜುನಾಥ ಬಮ್ಮನಕಟ್ಟೆಯವರು ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾಗಿದ್ಧಾರೆ. ಮತ್ತು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಸಮಯ ಟಿ.ವಿ. ಚಾನೆಲ್‌ನ ಗದಗ ವರದಿಗಾರರಾಗಿರುವ ಅವರು ಲಕ್ಷ್ಮೇಶ್ವರ ಮತ್ತು ಧಾರವಾಡಗಳಲ್ಲಿ ವಿದ್ಯಾಭ್ಯಾಸ ನಡೆಸಿದ್ದಾರೆ.   ...

READ MORE

Related Books