ಮನವು ಮಾತಾಡಿತು ದಾರಿಯುದ್ದಕ್ಕೂ

Author : ಗಣೇಶ್‌ ನಾಯಕ್ . ಪಿ

Pages 84

₹ 120.00




Year of Publication: 2023
Published by: ಪ್ರೇರಣಾ ಪ್ರಕಾಶನ
Address: ನೆಕ್ಕೆರೆ ಕುರಿಯ ಗ್ರಾಮ, ಪುತ್ತೂರು ತಾಲೂಕು 574210

Synopsys

ಇದೊಂದು ದಿನ ನಿತ್ಯ ಕಾಣುವ ಒಂದಷ್ಟು ಘಟನೆಗಳಿಗೆ ಅಕ್ಷರ ರೂಪ ನೀಡಲಾದ ಸಣ್ಣ ಪ್ರಯತ್ನ .ಕೇವಲ ಕೆಲವೇ ನಿಮಿಷದಲ್ಲಿ ಓದಿ ಮುಗಿಸಬಹುದಾದ ಸುಮಾರು 35ಕ್ಕೂ ಅಧಿಕ ಕತೆಗಳು ಇಲ್ಲಿವೆ. ವಾಸ್ತವಿಕತೆಯ ಪ್ರಸ್ತಾಪದ ಜೊತೆಗೆ ಒಂದಷ್ಟು ಯುವಜನತೆಗೆ ಪುಸ್ತಕ ಪ್ರೀತಿ ಬೆಳೆಸುವ ಉದ್ದೇಶದಿಂದ ನನ್ನ ಪ್ರಥಮ ಪ್ರಯತ್ನ ನಡೆದಿದೆ . ಇದೊಂದು ಕಲಿಕೆಯ ಹಾದಿಯ ಮಗುವಿನ ಸಣ್ಣ ಪ್ರಯತ್ನವಷ್ಟೇ ..ಇಲ್ಲಿ ಹಲವು ತಪ್ಪುಗಳಿರಬಹುದು ..ಎಷ್ಟಾದರೂ ಕಲಿಯುವಾಗ ಎಡವುದು ಸಹಜವಲ್ಲವೇ ?ಇವೆಲ್ಲವನ್ನು ತಮ್ಮ ಮನದ ಜೋಳಿಗೆಯ ಮೂಲೆಯಲ್ಲಿರಿಸಿ ನನ್ನನ್ನು 'ನಿಮ್ಮ‌ಮನೆಯ‌ಅಕ್ಷರ ದೀಪವೇಂದೇ ಭಾವಿಸಿ ' ನನ್ನ ಮುಂದಿನ ಬರವಣೆಗೆ ಪ್ರೇರಣೆ ನೀಡುವಿರಿ ಎಂಬ ನಂಬಿಕೆಯೊಂದಿಗೆ ಈ 'ಮನವು ಮಾತಾಡಿದ 'ವಿಚಾರಗಳನ್ನು ಪುಸ್ತಕ ರೂಪದಲ್ಲಿ‌ ನಿಮ್ಮ ಕೈಗಿತ್ತಿದ್ದೇನೆ ..ಇಲ್ಲಿ ಅಮ್ಮಾ ಕತೆಯಾಗಿದ್ದಾರೆ ..ಹಿರಿಯ ಜೀವವೊಂದು ಮಾತಾಡಿದೆ ..ತಂಗಿ‌ ಪ್ರೇರಣೆಯಾಗಿದ್ದಾಳೆ. ಕಾಗದದ ದೋಣಿ ತೇಲಿದೆ ..ಮಾಯೆಯೊಂದು ಸುತ್ತು ಹಾಕಿದೆ ..ಚಿತ್ರಮಂದಿರದ ಎದುರಿನ ಪೋಸ್ಟರ್ ರಾರಾಜಿಸಿದೆ..ಮಗುವಿನ‌ ನಗು ಅರಳಿದೆ...ಗಣಪನ ಗುಡಿಯಲ್ಲಿ ಬೆಳಕು ಕಂಡಿದೆ ..ಎಂಟನೆಯ ಮಹಡಿ‌ ಹತ್ತಿ ಮಾತು ಆರಂಭವಾಗಿದೆ ..ಸೇತುವೆಯ ನಿರ್ಮಾಣ ವಾಗಿದೆ ..ಧಣಿಗಳ ಮನೆ ಯ ದರ್ಶನವಾಗಿದೆ..ದೀಪದ ಬೆಳಕು ಪ್ರಕಾಶ ಬೀರಿದೆ ..ಜೊತೆಗಾತಿ ಕೈ ಹಿಡಿದು ಹಜ್ಜೆ ಹಾಕಿದ್ದಾಳೆ ..ಒಡೆಯ ಕರುಣೆ ತೋರಿದ್ದಾನೆ..ಕನಸು ನನಸಾಗಿದೆ ..ತೊಟ್ಟಿ ತುಂಬಿ ತುಳುಕಿದೆ ..ಮೊಸರು ಕುಡಿಕೆಯ ಕುಡಿಕೆ ಒಡೆದಾಗಿದೆ ..ಹುಡುಗ ಬೀದಿಯುದ್ದಕ್ಕೂ ಅಳೆದಿದ್ದಾನೆ ..ದಾಖಲೆ ದಾಖಲಾಗಿದೆ ..ಬಾಗಿಲು ತೆರೆದಾಗ ಸೈನಿಕನ ಮಾತು ಕೇಳಿದೆ ...ಒಡಲ ಬೇನೆ ಕೇಳಿದೆ ..ಇವಲ್ಲವನ್ನು‌ ಕಂಡು ಕೇಳಿ‌ ಮನವು ನಿಮ್ಮೊಂದಿಗೆ ಹೀಗೆ ಮಾತನಾಡಿದೆ ...ಈ "ಮನವು ಮಾತಾಡಿತು " ಪುಸ್ತಕ ದಿಂದ ಸಂಗ್ರಹವಾಗುವ ಮೊತ್ತದ ಒಂದಷ್ಟು ಮೊತ್ತವನ್ನು ತೀರಾ ಸಂಕಷ್ಟದಲ್ಲಿ ಓದು ಮುಂದುವರಿಸಲು ಅಸಾಧ್ಯ ವಾದ ಮನೆಯ 'ಅಕ್ಷರ ದೀಪ"ವನ್ನು ಬೆಳಗಿಸಲು ವಿನಿಯೋಗಿಸ ಬೇಕೆಂದು ತೀರ್ಮಾನಿಸಿದ್ದೇನೆ ..ನನ್ನ ಈ ಪ್ರಥಮ‌ ಪ್ರಯತ್ನ ದ "ಬರಹದ ಗುಚ್ಛ ವನ್ನು ಪ್ರೀತಿಯಿಂದ ಕತ್ತಲು ಕವಿದಿರುವ ಮನೆಯ ಅಕ್ಷರ ದೀಪ ಬೆಳಗಲು ನೀವೂ ನನ್ನೊಂದಿಗೆ ಕೈಜೋಡಿಸುವಿರಿ ಎಂಬ ಆಶಯದೊಂದಿಗೆ ಮಾತಿಗೆ ವಿರಾಮ ನೀಡುತ್ತೇನೆ - ಗಣೇಶ್‌ ನಾಯಕ್‌

About the Author

ಗಣೇಶ್‌ ನಾಯಕ್ . ಪಿ
(01 October 1988)

ಪುತ್ತೂರು ತಾಲೂಕಿನ ಮಾಡಾವಿನಲ್ಲಿ ಜನನ.  ಪ್ರಾಥಮಿಕ ವಿದ್ಯಾಭ್ಯಾಸವನ್ನು  ಸ.ಹಿ.ಪ್ರಾ ಶಾಲೆ ಪಡ್ಪಿನಂಗಡಿ ಹಾಗೂ ಹಂಟ್ಯಾರು,  ಪ್ರೌಢಶಿಕ್ಷಣವನ್ನು ಹಾಗೂ ಪದವಿಪೂರ್ವ ಶಿಕ್ಷಣವನ್ನು ಸ.ಪ.ಪೂ ಕಾಲೇಜು‌ ಕೊಂಬೆಟ್ಟುವಿನಲ್ಲಿ, ಪದವಿ ಶಿಕ್ಷಣವನ್ನು ಬೆಟ್ಪಂಪಾಡಿಯಲ್ಲಿ ಪೂರ್ಣಗೊಳಿಸಿದ್ದಾರೆ. ಎಂ.ಎ ಪದವಿಯನ್ನು ಮೈಸೂರಿನ ಮಾನಸ ಗಂಗೋಂತ್ರಿಯಲ್ಲಿ ಪಡೆದರು. ನಂತರ ಬದುಕಿನ ದಾರಿಗಾಗಿ ಮಂಗಳೂರಿನ ಸ್ವರೂಪ ಶಿಕ್ಷಣ ಕೇಂದ್ರದಲ್ಲಿ ಸಂಶೋದಕ ಶಿಕ್ಷಕನಾಗಿ 2010ರಲ್ಲಿ ಸೇರ್ಪಡೆಯಾದರು. ಪ್ರಸ್ತುತ ಜ್ಞಾನದೀಪ ವಿದ್ಯಾಸಂಸ್ಥೆ ಬೆಳ್ಳಾರೆಯಲ್ಲಿ ಉಪನ್ಯಾಸಕರಾಗಿದ್ದಾರೆ.  ಕಲಾತ್ಮಕ ಬರವಣಿಗೆ ಶೈಲಿಯನ್ನು ರೂಪಿಸಿಕೊಂಡಿರುವ ಇವರು  ಪ್ರಶ್ನೆಗಳ  ಸುಳಿಯಲ್ಲಿ, ಹೆಣ್ಣು ಪ್ರಶ್ನೆಯಾದಳು, ಸ್ಮಶಾನ ಮೌನ, ಮತ್ತೆ ಸಿಕ್ಕಿದ ಅಮ್ಮ , ಎಂಟನೆಯ ಮಹಡಿ ಇನ್ನೂ ಅನೇಕ ಸಣ್ಣ ಕಥೆಗಳು, ಲೇಖನಗಳನ್ನು ...

READ MORE

Related Books