ಅಧ್ಯಾತ್ಮಕ ಗುರು ಎಂದೇ ಖ್ಯಾತಿಯ ಸ್ವಾಮಿ ಸುಖಬೋಧಾನಂದ ಅವರ ಕೃತಿ-ಬಂಧಮುಕ್ತ ಶಾಂತಮುಕ್ತ. ಬದುಕನ್ನು ಬಂಧನ ಎಂದೇ ಹೇಳಲಾಗುತ್ತದೆ. ಒಂದು ವೇಳೆ ಅದು ಬಂಧನವಾದರೆ ಅದರಲ್ಲೂ ಹೇಗೆ ಸುಖವನ್ನು ಅನುಭವಿಸಬೇಕು ಎಂಬ ಸಂದೇಶವೊಂದಿದ್ದರೆ, ಬಂಧಿತ ಬದುಕಿನಿಂದ ಹೇಗೆ ಮುಕ್ತವಾಗಬೇಕು ಎಂಬ ಬಗ್ಗೆಯೂ ಒಂದು ಜ್ನಾನ ಬೋಧಿಸುತ್ತದೆ. ಒಂದರ್ಥದಲ್ಲಿ ದಾಸರು ಹೇಳಿದ ಹಾಗೆ ಈಸಬೇಕು ಇದ್ದು ಜೈಸ ಬೇಕು ಎಂಬಂತೆ. ಅಷ್ಟಕ್ಕೂ, ಬಂಧಮುಕ್ತ ಎಂದರೆ ಈ ಬದುಕಿನ ಬಂಧವನ್ನು ಎಲ್ಲ ರೀತಿಯ ಆಸೆಗಳಿಂದ ಮುಕ್ತವಾಗಿಸಬೇಕು. ಆ ಮೂಲಕ ಶಾಂತತೆಯನ್ನು ಅನುಭವಿಸಬೇಕು ಎಂಬ ಅಧ್ಯಾತ್ಮಿಕಸಂದೇಶ ನೀಡುವ ಕೃತಿ ಇದು.
©2025 Book Brahma Private Limited.