ಲೇಖಕ ಬೆ.ಕಾ. ಮೂರ್ತೀಶ್ವರಯ್ಯ ಅವರ ಕನ್ನಡ ಅನುವಾದಿತ ಕೃತಿ-ನಡಿಗೆಯೊಂದಿಗೆ ಧ್ಯಾನ. ನೋಬೆಲ್ ಶಾಂತಿ ಪುರಸ್ಕೃತ ತೀಚ್ ನ್ಹಾತ್ ಹಾನ್ ಅವರ ಮೂಲ ಕೃತಿ ಇದು. ಬೌದ್ಧ ಗುರು ತಿಚ್ ನ್ಹಾತ್ ಹಾನ್, ನಡಿಗೆಯ ಮಾರ್ಗದಲ್ಲಿ ಶಾಂತಿಯೇ ಉಸಿರಾಗಬೇಕು ಎಂದು ಪ್ರತಿಪಾದಿಸಿದ ಚಿಂತನೆಗಳಿವೆ. ನೀಲಾಕಾಶವು ನೀಡುವ ಚಿಂತನಾತ್ಮಕ ಪ್ರೇರಣೆ ಹೀಗೆ ನಡಿಗೆದಾರರಿಗೆ ಆರೋಗ್ಯಕರ ಸಲಹೆ ನೀಡಿದ್ದು, ಮನೋವಿಕಾಸಕ್ಕಾಗಿ ಒತ್ತಡರಹಿತ ಬದುಕಿಗಾಗಿ ನಡಿಗೆ ಬಹು ಮುಖ್ಯ. ಅದರೊಂದಿಗೆ ಧ್ಯಾನವೂ ಜೊತೆಗೂಡಿದರೆ ಮನೋ-ದೈಹಿಕ ವಿಕಾಸ ಸಾಧ್ಯ. ಮನಸ್ಸಿನ ನಿಯಂತ್ರಣವೂ ಸಾಧ್ಯ ಎಂಬ ವಿಚಾರದ ಉತ್ತಮ ಪ್ರೇರಣಾತ್ಮಕ ಕೃತಿ ಇದು.
©2025 Book Brahma Private Limited.