ಥ್ಯಾಂಕ್ಯೂ ಟೀಚರ್

Author : ವಿರೂಪಾಕ್ಷ ದೇವರಮನೆ

Pages 176

₹ 200.00




Year of Publication: 2020
Published by: ಸಾವಣ್ಣ ಎಂಟರ್‌ಪ್ರೈಸಸ್
Address: # 57, 1ನೇ ಮಹಡಿ, 1ನೇ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು
Phone: 9845224979

Synopsys

ಡಾ. ವಿರೂಪಾಕ್ಷ ದೇವರಮನೆ ಅವರು ಬರೆದ ಕೃತಿ-ಥ್ಯಾಂಕ್ಯೂ ಟೀಚರ್. ಗುರುವೇ ನಿಮ್ಮನೆಂತು ಮರೆವೆ-ಎಂಬುದು ಕೃತಿಗೆ ನೀಡಿರುವ ಉಪಶೀರ್ಷಿಕೆ. ಮಕ್ಕಳ ಸಮಸ್ಯೆಗಳನ್ನು ತಾಯಿ ಬಲ್ಲಳು. ನಂತರ ಬಲ್ಲ ವ್ಯಕ್ತಿ ಎಂದರೆ ಶಿಕ್ಷಕಿ. ಹೀಗಾಗಿ, ಮಕ್ಕಳು ತಾಯಿ ಹಾಗೂ ಶಿಕ್ಷಕಿಯರ ಮಾತು ಹೊರತುಪಡಿಸಿ ಉಳಿದೆಲ್ಲರ ಮಾತು ಕೇಳುವುದು ಸ್ವಲ್ಪ ಕಷ್ಟವೇ. ಏಕೆಂದರೆ, ಮಕ್ಕಳ ಮನೋಜಗತ್ತನ್ನು ಅರಿಯಲು ಈ ಇಬ್ಬರಿಗೆ ಮಾತ್ರ ಹೆಚ್ಚು ಸಾಧ್ಯವಾಗುತ್ತದೆ ಎಂದು ಮನೋವೈಜ್ಞಾನಿಕ ಅಧ್ಯಯನಗಳನ್ನು ಆಧರಿಸಿ ಲೇಖಕರು ತಮ್ಮ ಬರಹಗಳನ್ನು ಅರ್ಥವತ್ತಾಗಿಸಿದ್ದಾರೆ. ಮತ್ತು, ಸ್ವತಃ ಲೇಖಕರು ಮನೋವಿಜ್ಞಾನಿಯೂ ಆಗಿದ್ದರಿಂದ, ಬರಹಗಳು ಹೆಚ್ಚು ವಿಶ್ವಾಸಭರಿತ ಹಾಗೂ ಆತ್ಮೀಯವಾಗಿವೆ. ಪಾಲಕರು ತಮ್ಮ ಮಕ್ಕಳನ್ನು ಮತ್ತು ಜನಸಾನಮಾನ್ಯರೂ ಸಹ ಮಕ್ಕಳ ಮನಸ್ಸನ್ನು ಅರಿಯಲು ಸಹಾಯಕವಾಗುವ ಉತ್ತಮ ಕೈಪಿಡಿ ಮಾದರಿಯ ಕೃತಿ ಇದು.

About the Author

ವಿರೂಪಾಕ್ಷ ದೇವರಮನೆ

ವಿರೂಪಾಕ್ಷ ದೇವರಮನೆ ಮೂಲತಃ ಹೊಸಪೇಟೆಯ ನಾಗೇನಹಳ್ಳಿಯವರು. ದಾವಣಗೆರೆಯ ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಹಾಗೂ ಮಂಗಳೂರಿನ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯಲ್ಲಿ ಮನೋವೈದ್ಯಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು 2008ರಿಂದ ಉಡುಪಿಯ ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ಮನೋವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಲ್ಲಿ ಲೇಖಕರಾದ ವೈದ್ಯರು ಮಾನವ ಸಂಬಂಧಗಳು, ಸಂಬಂಧಗಳಲ್ಲಿ ಸಂವಹನ ಹಾಗೂ ಸಾಮರಸ್ಯ, ಪೇರೆಂಟಿಂಗ್, ಮಕ್ಕಳ ಆರೈಕೆ ಹಾಗೂ ಪೋಷಣೆ ಕುರಿತು ಹಾಗೂ ಉಪನ್ಯಾಸಗಳ ಮೂಲಕ ಪರಿಚಿತರು. ಮಕ್ಕಳು, ಹದಿಹರೆಯದವರು ಮತ್ತು ಯುವಜನತೆಯ ಶಿಕ್ಷಣ, ಬೆಳವಣಿಗೆ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಆಸಕ್ತಿ ಹೊಂದಿದ್ದು ಮದ್ಯವ್ಯಸನಿಗಳ ಮಕ್ಕಳಿಗಾಗಿ ...

READ MORE

Related Books