ಕವಿ ಬಾಗೂರು ಮಾರ್ಕಾಂಡೇಯ ಅವರು ಮಕ್ಕಳಿಗಾಗಿ ಬರೆದ ಕವನ ಸಂಕಲನ-ಪುಟಾಣಿ ಚಿಲಿಪಿಲಿ. ಮಕ್ಕಳಿಗೆ ಬಲು ಇಷ್ಟವಾಗುವ ಅನೇಕ ಕವಿತಗಳಿವೆ. ‘.. ಢಕ್ಕೆಯ ಬಡಿದರು ಢಂಢಂ ಎಂದು ಪೂಜಾ ಸಮಯದ ವೇಳೆಯ ಸಮಯದಲಿ ಭಕ್ತಿಯಲಿ ಕೈ ಮುಗಿದರು ಎಲ್ಲಾ ಪ್ರಾರ್ಥನೆ ಹಾಡಿನ ಧಾಟಿಯಲಿ ಭರವಸೆ ನೆಮ್ಮದಿ ಹರಕೆಯಲಿ....’ ಎನ್ನುವ ಸಂದೇಶವಿರುವ ಪುಟ್ಟ ಕವಿತೆ. ‘. ಮತ್ತೆ... ನೊಣವು ಹಾರಿ ಬಂತು ಹಣದ ಮೇಲೆ ಕುಳಿತು ಝಣ ಝಣಿಸಿ ಕುಣಿಯುತ್ತಿತ್ತು ಎಣಿಸಿ ಬೀಗುತ್ತಿತ್ತು...’ಎನ್ನುವ ತಾರ್ಕಿಕ ಗೀತೆಯೊಂದು ಮಕ್ಕಳು ಹಾಡಿ ನಲಿಯುವಂತಿದೆ.
©2025 Book Brahma Private Limited.