‘ಚಿಗುರು’ ಕೃತಿಯು ಬಿ.ಪಿ. ಕಟ್ಟಿಮನಿ ಅವರ ಮಕ್ಕಳ ಸಾಹಿತ್ಯ ಪ್ರಕಾರವಾಗಿದ್ದು, ಇಲ್ಲಿ ಅನೇಕ ಮಕ್ಕಳ ಕವಿತೆಗಳಿವೆ. ಮುಗ್ಧ ಮನಸ್ಸಿನೊಳಗೆ ಸಾಹಿತ್ಯದ ಬೀಜ ಬಿತ್ತಿ ಪೋಷಿಸುವ ಕಾರ್ಯ ಅನನ್ಯವಾದದ್ದು. ಮಕ್ಕಳ ಭಾವ ಕುಸುಮಗಳು ಅಕ್ಷರ ರೂಪದಲ್ಲಿ ರೂಪಿತವಾಗಿರುವುದೇ ಈ "ಚಿಗುರು". ಈ ಕೃತಿಯು, ದೇಶಾಭಿಮಾನ ,ಗುರು ಶಿಷ್ಯರ ಭಾಂದವ್ಯ, ಪರಿಸರದ ತಲ್ಲಣಗಳ ಪ್ರಸಂಗಗಳಿಗೆ ಕೈಗನ್ನಡಿಯಂತೆ ; ಮಕ್ಕಳು ಕವನಗಳನ್ನ ಹೆಣೆದಿರುವುದು ಸಾಹಿತ್ಯ ಕ್ಷೇತ್ರಕ್ಕೆ ದಿಟ್ಟ ಹೆಜ್ಜೆಯ ನೀಡುತ್ತಿರುವ ಈ ಗಳಿಗೆಯು ಅಮೋಘವಾದದ್ದು. ಮಕ್ಕಳ ಕವನಗಳನ್ನು ಸಂಪಾದಿಸಿ ಅವುಗಳಿಗೆ ಪುಸ್ತಕ ರೂಪ ನೀಡುವ ಮೂಲಕ ಅವರನ್ನು ಸಾಹಿತ್ಯ ರಚನೆಗೆ ಪ್ರೋತ್ಸಾಹಿಸುತ್ತಿರುವ ಗೆಳೆಯ ಕಟ್ಟಿಮನಿಯವರ ಕಾರ್ಯ ಶ್ಲಾಘನೀಯ.
©2025 Book Brahma Private Limited.