ಮಧು ಬಟ್ಟಲಿನ ಗುಟುಕು

Author : ದಸ್ತಗೀರ್‌ಸಾಬ್‍ ದಿನ್ನಿ

Pages 76

₹ 100.00




Year of Publication: 2024
Published by: ಜುನೇದ ಪ್ರಕಾಶನ
Address: ಡಾ. ದಸ್ತಗೀರಸಾಬ್‌ ದಿನ್ನಿ c/o ಎಂಎ ನಬೀ ಆಸೀಯಾನ ಏ ಮಂಜಿಲ್‌1ನೇ ಕ್ರಾಸ್‌, ಟಿಜಿಬಿ ಕಾಲೋನಿ ಶಾಸ್ತ್ರೀನಗರ. ಬಳ್ಳಾರಿ
Phone: 9448220710

Synopsys

“ಮಧು ಬಟ್ಟಲಿನ ಗುಟುಕು” ದಸ್ತಗೀರಸಾಬ್‌ ದಿನ್ನಿ ಅವರ ಗಜಲ್‌ ಸಂಕಲನವಾಗಿದೆ. ಉತ್ತಮ ದರ್ಜೆಯ ಗಜಲ್ ಬರೆಯುವುದು, ಬಹುತೇಕ ಗಜಲ್ ಕವಿಗಳಿಗೆ ಸಾಧ್ಯವಾಗುವುದಿಲ್ಲ. ಈ ದಿಸೆಯಲ್ಲಿ, ದಸ್ತಗೀರ್ ದಿನ್ನಿಯವರ ನಮ್ಮ ಪ್ರಯತ್ನ ಸ್ವಾಗತಾರ್ಹ. ಇವರಿಗೆ ಭಾವಗೀತಾತ್ಮಕತೆ ಸಹಜವಾಗಿರುವುದರಿಂದ ಇಲ್ಲಿನ ಗಜಲ್‌ಗಳು ಓದುಗರೊಂದಿಗೆ, ಹೃದಯ ಸಂವಾದಕ್ಕೆ ತೊಡಗುತ್ತವೆ. ಗಜಲ್ ಪ್ರಕಾರದ ರಾಚನಿಕ ಚೌಕಟ್ಟನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನವನ್ನು ಮಾಡಿದ್ದಾರೆ. ಆದರೆ ಇವರ ಅಭಿವ್ಯಕ್ತಿ ವ್ಯಕ್ತಿಗತ ದರ್ದುಗಳಿಂದ ರೂಪಿತವಾಗದೆ; ಸಾಮಾಜಿಕ ತುರ್ತುಗಳಿಂದ ನಿಯಂತ್ರಿತವಾಗಿದೆ. ಇಷ್ಟಾದರೂ ಆಗಾಗ ಸ್ಮರಣೀಯವಾದ ಉಪಮೆಗಳನ್ನು ಸೃಜಿಸುವ ಶಕ್ತಿ ಇವರಿಗಿದೆ. ಈ ಸಂಕಲನ ಅವರ ಗಜಲ್ ಯಾನಕ್ಕೆ ಒಂದು ಶುಭಾರಂಭವಾಗಿದೆ. ಈ ಯಾನ ಮುಂದುವರೆದು ಇವರ ಗಜಲ್‌ಗಳಲ್ಲಿ ಇನ್ನೂ ಹೆಚ್ಚಿನ ತೀವ್ರತೆ ಮತ್ತು ನುಡಿಗಟ್ಟಿನ ಅಚ್ಚುಕಟ್ಟುತನವನ್ನು ಅವರ ಮುಂದಿನ ಸಂಕಲನಗಳಲ್ಲಿ ಕಾಣುವ ಭರವಸೆಯನ್ನು ಈ ಸಂಕಲನ ನಮಗೆ ನೀಡುತ್ತದೆ.

About the Author

ದಸ್ತಗೀರ್‌ಸಾಬ್‍ ದಿನ್ನಿ
(01 June 1971)

ರಾಯಚೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಕವಿ-ಲೇಖಕ ದಸ್ತಗೀರ್‌ಸಾಬ ದಿನ್ನಿ, ತಾಳಕೇರಿ ಬಸವರಾಜ, ಬಿಸಿಲ ಹೂ, ಎಲ್ಲಾ ಕಾಲದ ಬೆಳಕು, ಆದಯ್ಯ, ಹೊಸಗನ್ನಡ ಕಥಾಸಂಗ್ರಹ, ಹಗೇವು, ದಿನ್ನಿ ತಾಳಪಲ್ಲಿ ವೆಂಕಯ್ಯ, ಸಾಹಿತ್ಯ ಸಲ್ಲಾಪ, ಜಾಗತೀಕರಣ ಮತ್ತು ಸಂಸ್ಕೃತಿ ಅವರ ಪ್ರಕಟಿತ ಕೃತಿಗಳು. ರಾಯಚೂರು ತಾಲೂಕಿನ ದಿನ್ನಿ ಗ್ರಾಮದಲ್ಲಿ ಜನನ.ಕವನ , ಗಜಲ್ , ಲೇಖನ, ವಿಮರ್ಶೆ ಬರೆದಿದ್ದಾರೆ. ...

READ MORE

Related Books