ಕಾಡು ಕೌತುಕದ ಖನಿ, ಜೊತೆಗೆ ಜೀವಸಂಕುಲಗಳ ಸಮತೋಲನದ ಸೂತ್ರ. ಒಂದು ಕಾಲಕ್ಕೆ ವಾಸ್ತವವಾಗಿದ್ದ ವನಸಿರಿಯ ಮೆಲುಕುಗಳು ಈಗ ಬರೀ ನೆನಪು ಮಾತ್ರ. ಮರೆಯಾದ ಹಸುರಿನ ಖಾಸಾ ಕತೆಗಳಿಗೆ ಪ್ರಸ್ತುತ ಉಳಿದಿರುವುದು ಕೇವಲ ರೋದನೆಯ ಮಗ್ಗುಲಷ್ಟೆ. ಗಿಡ, ಬಳ್ಳಿ, ಹೂವು, ಜೇನು, ಹಕ್ಕಿಗಳೆಲ್ಲವು ನಾಶಹೊಂದಿ ಕೊನೆಗೆ ಅವುಗಳು ನಮಗೆ ಚಿತ್ರಗಳು ಅಥವಾ ಪ್ರತಿಮೆಗಳಾಗಿ ಮಾತ್ರ ಕಾಣಸಿಗುತ್ತದೆ. ಕೊನೆಪಕ್ಷ ಯುವ ಪೀಳಿಗೆಗೆ ಓದಿನ ಮೂಲಕವಾದರೂ ಕಾಡಿನ ಘಮಲುಗಳನ್ನು ಲೇಖಕ ಶಿವಾನಂದ ಕಳವೆಯವರ ಪ್ರಯತ್ನವೂ ಈ ಕೃತಿಯಲ್ಲಿ ಅಡಗಿದೆ.
©2025 Book Brahma Private Limited.