ಕಲಿಕುಠಾರ ಅಥವಾ ಲೋಕಾಪುರ ಪೀಠಪ್ರಭಾ, ಭಾಗ-2 -ಗಳಗನಾಥರು ಬರೆದ ಕೃತಿ. ಇದು ಅವಧೂತ ಮಾರ್ಗದ ಚರಿತ್ರಾ ಗ್ರಂಥ. ಕೃತಿಯಲ್ಲಿ ಭುಜಂಗ ಯೋಗಿಯ ಜನ್ಮ, ಇಂದು ಉಡಾಳ, ನಾಳೆ ಯೋಗಿ, ತಪಶ್ಚರ್ಯದ ರೀತಿ, ಜಮಖಂಡಿಯ ಅಪ್ಪಾಸಾಹೇಬರು, ಮಹಿಮೆಗಳ ಸಾತ್ವಿಕತೆಯು, ಭುಜಂಗ ಯೋಗಿಯ ಮಹಿಮೆ, ಒಂದು ಹೃದಯ ಭೇದಕ ಮಹಿಮೆ, ಜ್ಞಾನ ಯೋಗ, ಭಕ್ತಿ ಯೋಗ ಹಾಗೂ ಕರ್ಮ ಯೋಗದ ಬಗ್ಗೆಯೂ ವಿವರಗಳಿವೆ. ಜ್ಞಾನೇಶ್ವರ ಸ್ವಾಮಿ, ಭುಜಂಗ ಸ್ವಾಮಿ, ಗುರುನಾಥ ಸ್ವಾಮಿಗಳು, ಎರಡನೇ ಜ್ಞಾನೇಶ್ವರ ಸ್ವಾಮಿಗಳು ಹಾಗೂ ರಾಮಚಂದ್ರ ಸ್ವಾಮಿಗಳು ಇವರ ವಿವರಗಳು ಇಲ್ಲಿ ಲಭ್ಯವಿವೆ.
ವಿಪುಲವಾದ ಕನ್ನಡ ಬರೆವಣಿಗೆಯಿಂದ ಇಡೀ ನಾಡಿನಲ್ಲಿ ಭಾಷಾ ಜಾಗೃತಿಯನ್ನುಂಟುಮಾಡಿದ ಪ್ರಸಿದ್ಧ ಲೇಖಕರಲ್ಲೊಬ್ಬರು ವೆಂಕಟೇಶ ತಿರಕೋ ಕುಲಕರ್ಣಿ. ’ಗಳಗನಾಥ’ ಅವರ ಕಾವ್ಯನಾಮ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಹಾವೇರಿ ತಾಲ್ಲೂಕಿನ ಗಳಗನಾಥ ಎಂಬ ಹಳ್ಳಿ. ಗಳಗನಾಥರ ಮೊದಲ ಕಾದಂಬರಿ ’ಪದ್ಮನಯನೆಗೆ ಬಹುಮಾನ’. 1898ರಿಂದ 1942ರವರೆಗೆ ಅವ್ಯಾಹತ ಬರವಣಿಗೆಯಲ್ಲಿ ತೊಡಗಿಕೊಂಡವರು. ’ಕಮಲಕುಮಾರಿ, ಮೃಣಾಲಿನಿ, ವೈಭವ, ಕನ್ನಡಿಗರ ಕರ್ಮಕಥೆ’ ಮುಂತಾದ ಕಾದಂಬರಿಗಳ ರಚಿಸಿದ್ಧಾರೆ. ’ಗಿರಿಜಾ ಕಲ್ಯಾಣ, ಉತ್ತರರಾಮ ಚರಿತ್ರೆ, ಚಿದಂಬರ ಚರಿತ್ರೆ ಮುಂತಾದ ಪೌರಾಣಿಕ ಕಥೆಗಳು, ಸತ್ಪುರುಷರ ಚರಿತ್ರೆಗಳು, ನಿಬಂಧ-ಪ್ರಬಂಧಗಳ ರಚನೆ, ಪ್ರಕಟಣೆ. 1907ರಲ್ಲಿ ಸದ್ಬೋಧ ಚಂದ್ರಿಕಾ ಮಾಸಪತ್ರಿಕೆ ಪ್ರಾರಂಭಿಸಿದರು.. ‘ಮಾಧವ ಕರುಣಾವಿಲಾಸ’ ...
READ MORE