ಡಾ. ಪಾಂಡುರಂಗ ವಾಮನಕಾಣೆ ಧರ್ಮಶಾಸ್ತ್ರದ ಇತಿಹಾಸದಂತಹ ಅತ್ಯುತ್ಕೃಷ್ಟವಾದ ಗ್ರಂಥಗಳನ್ನು ನೀಡಿ ಭಾರತೀಯ ವಿದ್ವಾಂಸರಲ್ಲಿ ರತ್ನಪ್ರಾಯವಾಗಿದ್ದವರು. ಮಹಾಭಾರತ ಮತ್ತು ರಾಮಾಯಣ ಮಹಾ ಕಾವ್ಯಗಳನ್ನು ಕುರಿತು ಪ್ರಬಂಧವನ್ನು ಮಂಡಿಸಿದ್ದಾರೆ.
ಎರಡೂ ಕಾವ್ಯಗಳನ್ನು ಉತ್ತಮ ಮಾನದಂಡದಿಂದ ತೂಗಿದ್ದಾರೆ. ಅವುಗಳಲ್ಲಿ ಪ್ರಾಚೀನವಾದುದು ಯಾವುದು, ಅವುಗಳ ಕರ್ತೃವಿನ ವಿಚಾರ, ಅವುಗಳ ಕಾಲ, ಆ ಕಾಲದ ಸಮಾಜದ ಪರಿಸರ, ಯಾವುದರಿಂದ ಯಾವುದು ಉಪಕೃತವಾಗಿದೆ, ಅವುಗಳ ಬಗೆಗೆ ಬಂದಿರುವ ದೇಶೀಯರ ಹಾಗೂ ವಿದೇಶೀಯರ ಟೀಕೆಗಳನ್ನು ಶಿಸ್ತುಬದ್ಧವಾಗಿ ಪರಿಶೀಲಿಸಿ, ಈ ಎಲ್ಲಾ ಸಂಗತಿಗಳ ಕುರಿತು ಕೃತಿಯಲ್ಲಿ ವಿವರಿಸಿದ್ದಾರೆ.
©2025 Book Brahma Private Limited.