ಬಿಳಿಚೋಡು ವಿರೂಪಾಕ್ಷ ಜೋಯಿಸರು ಚಿತ್ರದುರ್ಗ ನಾಯಕ ಸಂಸ್ಥಾನದ ರಾಜ ಗುರುವಾಗಿದ್ದವರು. ಚಿನ್ನದಮನೆಯ ರಾಮಪ್ಪನವರು ಚಿತ್ರದುರ್ಗದ ಮೊದಲ ಅಧಿಕೃತ ಇತಿಹಾಸಕಾರರು. ಈ ಇಬ್ಬರ ಬಗ್ಗೆಯೂ ಮಾಹಿತಿ ನೀಡುವ ಅಪರೂಪದ ಸಂಶೋಧನಾ ಕೃತಿಯನ್ನು ಲಕ್ಷ್ಮಣ ತೆಲಗಾವಿ ಹೊರತಂದಿದ್ದಾರೆ.
ಇಂತಹ ವ್ಯಕ್ತಿತ್ವಗಳ ದರ್ಶನದಿಂದ ಚರಿತ್ರೆಯ ಬೇರೆ ಬೇರೆ ಮಗ್ಗುಲುಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯಕವಾಗುತ್ತದೆ. ಆ ನಿಟ್ಟಿನಲ್ಲಿ ಕೃತಿಕಾರರ ಸಾಹಸ ಮೆಚ್ಚುವಂಥದ್ದು.
ಇತಿಹಾಸಜ್ಞ, ಸಂಶೋಧಕ ಲಕ್ಷ್ಮಣ್ ತೆಲಗಾವಿಯವರು 1947 ಜನವರಿ 01 ಹುಟ್ಟಿದ್ದು ಚಿತ್ರದುರ್ಗದಲ್ಲಿ. ಹಲವಾರು ಐತಿಹಾಸಿಕ, ಸಾಮಾಜಿಕ ಚಳುವಳಿಗಳ ಗ್ರಂಥಗಳ ರಚಿಸಿ ಮತ್ತು ಪ್ರಕಟಿಸಿದ್ಧಾರೆ. ಚಿತ್ರದುರ್ಗ ದರ್ಶಿನಿ, ಇದು ಚಿತ್ರದುರ್ಗ, ಚಿತ್ರದುರ್ಗ ಹ್ಯಾನ್ ಇನ್ಸೈಟ್, ಬುರುಗು (ಚಿಂತನ ಲೇಖನಗಳು), ಕರ್ನಾಟಕ ಹಿಂದುಳಿದ ವರ್ಗಗಳ ಮತ್ತು ದಲಿತ ಚಳುವಳಿಗಳು, ಮೌರ್ಯ ಮತ್ತು ಶಾತವಾಹನಯುಗ, ಚಿತ್ರದುರ್ಗಜಿಲ್ಲಾ ಇತಿಹಾಸ, ಚಿತ್ರದುರ್ಗ ನಾಯಕ ಅರಸರು, ವಿಜಯನಗರಕಾಲದ ರಾಮಾನುಜಕೂಟಗಳು, ಎಪ್ಪತ್ತೇಳು ಪಾಳಯಗಾರರು, ಚಿತ್ರದುರ್ಗದ ಒನಕೆ ಓಬವ್ವ, ಚಾರಿತ್ರಿಕ ವಿವೇಚನೆ, ದೊಡ್ಡೇರಿಕದನ ಮುಂತಾದ ಕೃತಿಗಳನ್ನು ಸ್ವಾತಿ ಪ್ರಕಾಶನ, ವಾಲ್ಮೀಕಿ ಸಾಹಿತ್ಯ ಸಂಪದ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯಗಳು ...
READ MORE