ಭಾರತೀಯ ಕಾವ್ಯತತ್ವಗಳಿಗೆಲ್ಲ ಕೈಕನ್ನಡಿ-ಆನಂದವರ್ಮ ವಿರಚಿತ”ಧ್ವನ್ಯಾಲೋಕ’ ಕೃತಿ. ರಾಮಾಯಣ, ಮಹಾಭಾರತ ಕಾವ್ಯಗಳಿಂದ ತನ್ನ ಒಂದೊಂದು ನೂತನ ಪರಿಕಲ್ಪನೆಗಳಿಗೂ ಪ್ರಮಾಣವನ್ನು ಒದಗಿಸುತ್ತಾ ಅನಂದವರ್ಮನು ಪ್ರಾಕೃತ ಚಾಟುಪದ್ಯಗಳನ್ನು ದೃಷ್ಟಾಂತವಾಗಿ ಬಳಸಿದ್ದಾನೆ. ಆನಂದ ವರ್ಮನ ಕಾವ್ಯ ರಚನಾ ಚಾತುರ್ಯ, ಕಾವ್ಯ ಮೀಮಾಂಸೆಯ ಪಟುತ್ವ, ಶಾಸ್ತ್ರಾಭ್ಯಾಸದ ಸಿದ್ದಿ ಎಲ್ಲವನ್ನೂ ಅನುವಾದಕ ಡಾ. ಕೆ.ಕೃಷ್ಣಮೂರ್ತಿ ಅವರು ಭಾಷಾಂತರಿಸಿ ಅದರ ಭವ್ಯತೆಯನ್ನು ತೋರಿದ್ದಾರೆ ಎಂದು ಡಾ. ಕೆ. ಲೀಲಾಪ್ರಕಾಶ್ ಅವರು ಕೃತಿಯ ಮುನ್ನುಡಿಯಲ್ಲಿ ಪ್ರಶಂಸಿಸಿದ್ದಾರೆ.
ಕೆ.ಕೃಷ್ಣಮೂರ್ತಿ- ಹುಟ್ಟಿದ್ದು ಹಾಸನ ಜಿಲ್ಲೆ ಕೇರಳಾಪುರದಲ್ಲಿ. ಮಹಾರಾಜ ಕಾಲೇಜಿನಲ್ಲಿ ಬಿ.ಎ ಮತ್ತು ಎಂ.ಎ. ಕನ್ನಡ, ಇಂಗ್ಲಿಷ್, ಸಂಸ್ಕೃತ ಭಾಷೆಗಳಲ್ಲಿ ಸರ್ವಪ್ರಾವಿಣ್ಯ. ಬೊಂಬಾಯಿ ವಿಶ್ವವಿದ್ಯಾಲಯದಿಂದ ಧ್ವಾನ್ಯಾಲೋಕ ಮತ್ತು ಅದರ ವಿಮರ್ಶೆ ಡಾಕ್ಟರೇಟ್ ಪದವಿ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಂಸ್ಕೃತ ವಿಭಾಗದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಕೆಲಸ. ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದ ಮುಖ್ಯಪುಸ್ತಕಗಳು ಧ್ವನ್ಯಾಲೋಕ ಮತ್ತು ಆನಂದವರ್ಧನನ ಕಾವ್ಯಮೀಮಾಂಸೆ, ಮಮ್ಮಟನ ಕಾವ್ಯ ಪ್ರಕಾಶ. ರಾಜಶೇಖರನ ಕಾವ್ಯ ಮೀಮಾಂಸೆ, ದಂಡಿಯ ಕಾವ್ಯದರ್ಶನ, ವಾಮನನ ಕಾವ್ಯಲಂಕರಸೂತ್ರವೃತ್ತಿ, ಕ್ಷೇಮೇಂದ್ರನ ಕವಿಕಂಠಾಭರಣ, ಔಚಿತ್ಯಚರ್ಚೆ, ಭಾಮಹನ ಕಾವ್ಯಾಲಂಕಾರ, ಹಾಗೆಯೇ ಇಂಗ್ಲಿಷಿನಲ್ಲಿ ವಕ್ರೋಕ್ತಿಜೀವಿತ, ಧ್ವನ್ಯಾಲೋಕ, ನಾಟ್ಯಶಾಸ್ತ್ರ ಮತ್ತು ಅಭಿನವ ಭಾರತಿ, ...
READ MORE