ಪ್ರಾಚೀನಕಾವ್ಯವೊಂದಕ್ಕೆ ಆಧುನಿಕ ಸೃಜನಶೀಲ ಮನಸ್ಸೊಂದು ಪ್ರತಿಕ್ರಿಯಿಸಿರುವ ಫಲದಂತೆ ಕಾಣುತ್ತದೆ ಎಚ್.ಎಸ್. ವೆಂಕಟೇಶಮೂರ್ತಿ ಅವರ ’ಶ್ರೀರಾಮಚಾರಣ’. ಪ್ರಸ್ತುತ ಸಮಾಜಕ್ಕೆ ಅನುಗುಣವಾಗಿ ಇಲ್ಲ ಕಾವ್ಯರಚನೆಯ ಕಾರ್ಯ ನಡೆದಿದೆ.
ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ್ದ ಹಿರಿಯ ವಿಮರ್ಶಕ ಸಿ.ಎನ್. ರಾಮಚಂದ್ರನ್, ’ಶ್ರೀರಾಮಚಾರಣ ಮಹಾಕಾವ್ಯ ಪ್ರಾಚೀನ ಮಹಾಕಾವ್ಯದ ಜೊತೆಗೆ ಆಧುನಿಕ ಸಂವೇದನೆ ಯಾವ ರೀತಿ ಅನುಸಂಧಾನ ಮಾಡಿಕೊಳ್ಳಬಹುದು ಎಂಬುದಕ್ಕೆ ಉತ್ತಮ ಉದಾಹರಣೆ’ ಎಂದು ಪ್ರತಿಕ್ರಿಯಿಸಿದ್ದರು. ಕೃತಿ ಕುರಿತು ಪುಸ್ತಕದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ವೈದೇಹಿ, ’ಸುಲಭವೆಂದು ತೋರುವ ಆದರೆ ಖಂಡಿತವಾಗಿಯೂ ಸುಲಭವಲ್ಲದ ಮಗುವನುಣಿಸಿದಂತಹ ರಚನಾಕ್ರಮದಲ್ಲಿ ರಾಮಾಯಣ ಇಲ್ಲಿ ತೆರೆದುಕೊಂಡಿದೆ’ ಎಂದಿದ್ದಾರೆ.
ವಿಮರ್ಶಕ ಟಿ.ಪಿ. ಅಶೋಕ ಅವರ ಪ್ರಕಾರ 'ಸಮೃದ್ದವೂ, ವೈವಿಧ್ಯಮಯವೂ ಆಗಿರುವ ಕನ್ನಡ ವಾಟ್ಯಯಸ್ಥೆ ಎಚ್ಎಸ್.ವಿ ಅವರ ಶ್ರೀರಾಮಚಾರಣ ಮಹಾಕಾವ್ಯವು ಮತ್ತೊಂದು ಮೌಲಿಕ ಸೇರ್ಪಡೆ' ಎಂದು ತಿಳಿಸಿದ್ದಾರೆ.
ಶ್ರೀರಾಮಚಾರಣ
©2025 Book Brahma Private Limited.