ಇನ್ನೂ ಕೊಟ್ಟೆನಾದೊಡೆ

Author : ಚನ್ನಪ್ಪ ಅಂಗಡಿ

Pages 96

₹ 125.00




Year of Publication: 2024
Published by: ಮಿಂಚುಳ್ಳಿ ಪ್ರಕಾಶನ
Address: ಇಂದಿರಾ ಬಡಾವಣೆ, 6ನೇ ತಿರುವು, ಗುರುಪುರ, ಶಿವಮೊಗ್ಗ-577204
Phone: 9591367320

Synopsys

`ಇನ್ನೂ ಕೊಟ್ಟೆನಾದೊಡೆ’ ಚೆನ್ನಪ್ಪ ಅಂಗಡಿ ಅವರ ಕವಿತೆಗಳ ಸಂಗ್ರಹವಾಗಿದೆ. ಈ ಸಂಕಲನದ 'ಇನ್ನು ಕೊಟ್ಟೆನಾದೊಡೆ', 'ಆಸವ', 'ಹಮ್ಮಿಂಗ್ ಬರ್ಡ್‌ ಸ್ವಗತ', 'ಒಕ್ಕಲೇಳುವವನ ಒಕ್ಕಣಿಕೆ' - ಕವಿತೆಗಳನ್ನು ಗಮನಿಸಿದರೆ ಚನ್ನಪ್ಪ ಅಂಗಡಿಯವರ ಕಾವ್ಯದೀಕ್ಷೆ ಯಾವ ಬಗೆಯದು ಎಂಬುದು ತಿಳಿಯುತ್ತದೆ. ಕಾವ್ಯವನ್ನು ಗಂಭೀರವಾಗಿ ಪರಿಗಣಿಸಿ ಅದರ ಸಾಧ್ಯತೆಗಳನ್ನೆಲ್ಲ ಸೂರೆಮಾಡುವ ಸವಾಲಿಗೆ ಎದುರಾಗಿರುವ ಕವಿಗಳಲ್ಲಿ ಚನ್ನಪ್ಪ ಮುಖ್ಯರು ಎಂಬುದಕ್ಕೆ ಈ ಸಂಕಲನದಲ್ಲಿ ಪುರಾವೆಗಳಿವೆ. ವಚನಗಳ ದಟ್ಟ ಪ್ರಭಾವ, ಸಾನಿಧ್ಯ, ಸಂಸರ್ಗ ಈ ಕವಿಗೆ ಇರುವುದನ್ನು ಇಲ್ಲಿನ ಕಾವ್ಯ ತೋರಿಸುತ್ತದೆ. ಭಾಷೆಯ ಚೆಲುವನ್ನು, ಚಲನೆಯನ್ನು, ಬಂಧ, ಭಾವ, ಬಳುಕು ಬಿನ್ನಾಣಗಳನ್ನು ಅರಿತು, ಆ ಮೂಲಕವೇ ತನ್ನ ಕಾವ್ಯ ಅವತರಿಸಬೇಕೆಂಬ ಹಠಕ್ಕೆ ಕಟ್ಟುಬಿದ್ದಿರುವ ಚನ್ನಪ್ಪ ನಿಷ್ಠೆಯಿಂದ, ನಂಬಿಕೆಯಿಂದ, ಸತತ ಪರಿಶ್ರಮದಿಂದ ಈ ಕಾಯಕದಲ್ಲಿ ತೊಡಗಿರುವದೂ ಇಲ್ಲಿ ಕಾಣಿಸುತ್ತದೆ.

About the Author

ಚನ್ನಪ್ಪ ಅಂಗಡಿ
(15 April 1970)

ಚನ್ನಪ್ಪ ಅಂಗಡಿ ಅವರು  ಎಮ್ ಎಸ್ ಸಿ (ಕೃಷಿ)  ಸಹಾಯಕ ಕೃಷಿ ನಿರ್ದೇಶಕರಾಗಿದ್ದಾರೆ.   ಇವರು ಜನಿಸಿದ್ದು15.04.1970, ಬಮ್ಮನಹಳ್ಳಿ ಹಾವೇರಿ ಜಿಲ್ಲೆಯಲ್ಲಿ.   ಮಂದ ಬೆಳಕಿನ ಸಾಂತ್ವನ, ಭೂಮಿ ತಿರುಗುವ ಶಬ್ದ (ಕವನಸಂಕಲನ), ಮಣ್ಣಿನೊಳಗಣ ಮರ್ಮ, ಕಿಬ್ಬದಿಯ ಕೀಲುಳುಕಿ (ಕಥಾಸಂಕಲನ), ಎದೆಯ ಒಕ್ಕಲಿಗ (ವೈಚಾರಿಕ), ಕೃಷಿ ಕಾರಣ ಸಂಪಾದನೆ : ಮಡಿಲು, ಕಾಯಕಯೋಗಿ, ಕದಂಬ, ಬಿತ್ತೋಣ ಹತ್ತಿ ಬೆಳೆಯೋಣ, ಗಿಡಗಂಟೆಗಳ ಕೊರಳು ಕೃತಿಗಳನ್ನು ರಚಿಸಿದ್ದಾರೆ. ಭೂಚೇತನ ಪ್ರಶಸ್ತಿ , ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಕಾವ್ಯ), ಮುದ್ದಣ ರತ್ನಾಕರವರ್ಣಿ ಅನಾಮಿಕ (ಕಸಾಪ) ಪ್ರಶಸ್ತಿ, ವಿಭಾ ಸಾಹಿತ್ಯ ಪ್ರಶಸ್ತಿ, ...

READ MORE

Related Books