ಕೊನೆಯ ಉತ್ತರ ಮೂರು ಅಂಕಗಳ ಕಿರುನಾಟಕ. ಈ ನಾಟಕವು ರಾಮ್ನಿಕ್ ಗಾಂಧಿ ಎಂಬ ವ್ಯಾಪಾರಿಯ ಮನೆಯಲ್ಲಿ ಒಂದು ನಡುರಾತ್ರಿ ರಕ್ಷಣೆ ಕೋರಿ ಇಬ್ಬರು ಮುಸ್ಲಿಮ್ ಹುಡುಗರು ಪ್ರವೇಶಿಸುತ್ತಾರೆ. ಅದರೊಂದಿಗೆ ಆ ಬಡಾವಣೆಯಲ್ಲಿ ಎರಡು ದಿನದ ಹಿಂದೆ ರಥಯಾತ್ರಗೆ ಕಲ್ಲುಬಿದ್ದು ಗಲಭೆಯಾಗಿರುವುದು, ಕರ್ಫ್ಯೂವಿಧಿಸಿರುವುದು, ಬೀದಿಗಳಲ್ಲಿ ರಾತ್ರಿ ಆಗುವಹಲ್ಲೆಗಳು ಬಿಚ್ಚಿಕೊಳ್ಳುತ್ತವೆ. ಮುಸ್ಲಿಹುಡುಗರ ಪ್ರವೇಶದಿಂದ ಮನೆಯಒಳಗಡೆ ಇರುವ ಪಾತ್ರಗಳ ಒಳಗಿನಸಂಘರ್ಷಗಳುಅನಾವರಣವಾದರೆ, ಮನೆಯ ಹೊರಗೆ ಇರುವ ಗುಂಪು ಎಂಬುದು ಮುಖವಾಡ ಬದಲಿಸುತ್ತಾ, ಎರಡೂ ಕೋಮಿನ ಮೂಲಭೂತವಾದಿಗಳ ಹಾಗೆಯೂ ಮಾತನಾಡುತ್ತಾ, ಕೋಮುವಾದಿಗಳು ಮುಖವಿಲ್ಲದವರು ಎಂಬುದನ್ನು ಬಿಚ್ಚಿಡುತ್ತದೆ. ಕೋಮುಗಲಬೆಯನ್ನು ಕುರಿತಂತೆ ಎರಡೂಬಣಗಳ ಒಳವಿವರವನ್ನು ಬಿಚ್ಚಡುತ್ತಾ ಪ್ರೀತಿಯೊಂದೆ ಶಾಶ್ವತ, ಜಾತಿಮತಭೇದಗಳಲ್ಲ ಎಂಬ ಸಂದೇಶವನ್ನು ಈ ನಾಟಕದಲ್ಲಿ ನೀಡಿದ್ದಾರೆ.
©2025 Book Brahma Private Limited.