ಮಾಧ್ಯಮಗಳಲ್ಲಿ ಆಸಕ್ತಿ ಹೊಂದಿರುವ ಮಲ್ಲಿಕಾರ್ಜುನ ಪಾಟೀಲರು ತಮ್ಮ ಕೆಲ ಕಾದಂಬರಿಗಳನ್ನು ನಾಟಕಗಳಾಗಿಯೂ, ಸಿನಿಮಾ ಲೋಕಕ್ಕೂ ತಂದವರು. ಉತ್ತರ ಕರ್ನಾಟಕದ ಗ್ರಾಮೀಣ ಸೊಗಡಿನ ಅವರ ’ರೈತ ಕಲ್ಲಪ್ಪನ ಆತ್ಮಹತ್ಯೆ’ ಕಾದಂಬರಿ ನೇಗಿಲ ಯೋಗಿ ಹೆಸರಿನಲ್ಲಿ ಸಿನಿಮಾ ಆಗಿದೆ.
ರಂಗಭೂಮಿಯು ತನ್ನ ಮೂಲ ಉದ್ದೇಶ ಬಿಟ್ಟು ಬೇರೆಡೆ ಸಾಗುತ್ತಿದೆ ಅನ್ನಿಸಿದಾಗ ಅವರು ’ಇದು ಹಿಂಗ್ಯಾಕ ಆತು’ ಎಂಬ ನಾಟಕದ ಮೂಲಕ ಅರಿವು ಮೂಡಿಸಿದರು. ಮಲ್ಲಿಕಾರ್ಜುನ ಪಾಟೀಲರ ಹಲವು ನಾಟಕಗಳ ಮೊತ್ತ ಈ ಸಂಕಲನ.
©2025 Book Brahma Private Limited.