‘ಸಂಗೀತ ಸಂಪುಟ’ ಭಾರತೀಯ ಸಂಗೀತ ಕುರಿತ ಮಹತ್ವದ ಲೇಖನಗಳನ್ನು ಡಾ. ಶಶಿಕಲಾ ವಿ. ಚವಡಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇಲ್ಲಿ ಮಂಜು ಶರ್ಮ ಅವರ ರಾಗರಾಗಿಣಿಗಳ ಸ್ವರೂಪ, ಡಾ. ವಿಶ್ವನಾಥ ಶುಕ್ಲ ಅವರ ರಾಗ-ಶಬ್ದ ನಿಷ್ಪತ್ತಿ ಮತ್ತು ಪರಿಭಾಷೆ, ಮಂಜುಲಿಕಾರಾಯ ಚೌಧರಿ ಅವರ ಸಂಗೀತ ಘರಾನೆಗಳ ವಿವಾದ, ಸುಮಿತ್ರಾ ಆನಂದಪಾಲ ಸಿಂಹ ಅವರ ಭಾತ್ಪಂಡೆಯವರ ದೃಷ್ಟಿಯಲ್ಲಿ ರುಮರಿಯ ಸ್ಥಾನ, ಶ್ರೀಮತಿ ಉಮಾ ಗರ್ಗ ಅವರ ರಸ ಸೃಷ್ಟಿಯಲ್ಲಿ ಆಲಾಪ ಮತ್ತು ತಾಲಗಳ ಭೂಮಿಕ, ಪ್ರಭುಲಾಲ್ ಗರ್ಗ ಅವರ ಸ್ವಾಮಿ ಹರಿದಾಸ ಮತ್ತು ತಾನಸೇನ, ಡಾ. ನಾರಾಯಣ ಮೆನನ್ ಅವರ ಭಾರತೀಯ ಸಂಗೀತ ಹಾಗೂ ವೃಂದಗಾನ, ನರ್ಮದೇಶ್ವರ ಚತುರ್ವೆದಿ ಅವರ ಭಾರತೀಯ ಸಂದರ್ಭದಲ್ಲಿ ಲೋಕ ಸಂಗೀತ ಸೇರಿದಂತೆ ಹಲವು ವಿದ್ವಾಂಸರ ಮಹತ್ವದ ಲೇಖನಗಳು ಸಂಕಲನಗೊಂಡಿವೆ.
©2025 Book Brahma Private Limited.