ಭಾರತ ಬೆಸುಗೆ ಎಂಬ ಪ್ರಮುಖ ಶೀರ್ಷಿಕೆಯಡಿ ಲೇಖಕ ಸ್ಯಾಮ್ ಪಿತ್ರೊಡ ಅವರು ಸಂಪರ್ಕ ಕ್ರಾಂತಿಯ ಹೃದಯಸ್ಪರ್ಶಿ ಕಥೆಯನ್ನು ದಾಖಲಿಸಿದ ಕೃತಿ. ಲೇಖಕ-ಅನುವಾದಕ ಬಿ.ಎಸ್. ಜಯಪ್ರಕಾಶ ನಾರಾಯಣ ಕನ್ನಡಕ್ಕೆ ಅನುವಾದಿಸಿದ್ದಾರೆ. ಭಾರತದಲ್ಲಿ ಮಾತ್ರ ಸ್ಯಾಮ್ ಪಿತ್ರೊಡನ ಕಾರ್ಯಯೋಜನೆಗಳಿಂದ ದೂರವಾಣಿ ಸಂಪರ್ಕ ತೀವ್ರತೆ ಪಡೆದುಕೊಂಡಿತು. ಅಂದಿನ ಪ್ರಧಾನಿ ರಾಜೀವಗಾಂಧಿ ಅವರು ಸ್ಯಾಮ್ ಪಿತ್ರೊಡ್ ಅವರು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಿದ್ದರ ಫಲವಾಗಿ ಇಡೀ ದೇಶದ ತುಂಬಾ ಸಂಪರ್ಕ ಜಾಲ ವಿಸ್ತರಿಸಿಕೊಂಡು ವೇಗ ಪಡೆದಿತ್ತು. ಕ್ರಾಂತಿ ಸದೃಶ್ಯವಾದ ಸಂಪರ್ಕ ಜಾಲದ ಕಥೆಯನ್ನು ವಿವರಿಸಿದ್ದಾರೆ.
©2025 Book Brahma Private Limited.