ಬಡತನದ ಕುಟುಂಬದಲ್ಲಿ ಜನಿಸಿದ ಅಣ್ಣಾಭಾವು ಸಾಠೆ ಅವರು ಜಾತಿನಿಂದನೆಗೆ ಒಳಗಾದವರು. ನಂತರ ಸಾಹಿತಿಯಾಗಿ, ಕಲಾವಿದನಾಗಿ, ಹೋರಾಟಗಾರನಾಗಿ ಗುರುತಿಸಿಕೊಂಡವರು. ಅವರ ಹೆಸರಲ್ಲಿ ಸಾಹಿತ್ಯ ಸಮ್ಮೇಳನಗಳು ನಡೆಯುತ್ತವೆ. ಈವರೆಗೆ ಮಹಾರಾಷ್ಟ್ರದಲ್ಲಿ ಏಳು ಸಮ್ಮೇಳನಗಳು ನಡೆದರೆ ಎಂಟನೇ ಸಮ್ಮೇಳನ ನಡೆದದ್ದು ಕನ್ನಡ ನಾಡಿನ ಕಲಬುರಗಿಯಲ್ಲಿ. ಸಮ್ಮೇಳನದ ಅಂಗವಾಗಿ ವಿವಿಧ ಸಮ್ಮೇಳನಗಳ ಅಧ್ಯಕ್ಷರ ಭಾಷಣಗಳನ್ನು ಪಟ್ಟಿ ಮಾಡಿ ನೀಡಲಾಗಿದೆ.
ಕನ್ನಡ-ಮರಾಠಿ ಪರಂಪರೆಯ ಕೊಂಡಿಯಂತೆಯೂ ಇರುವ ಅಣ್ಣಾಭಾವು ಸಾಠೆ ಅವರನ್ನು ಅರಿಯಲು ಈ ಕೃತಿ ಸಹಕಾರಿಯಾಗುತ್ತದೆ.
©2025 Book Brahma Private Limited.