ಹಿಮಾಲಯ ಋಷಿಗಳ ದಿವ್ಯ ಸಂದೇಶಗಳು

Author : ಗುರು ಸಕಲಮಾ

Pages 336

₹ 499.00




Year of Publication: 2024
Published by: ಗುರು ಸಕಲಮಾ
Address: #04, ಸಾಧನ ಸಂಗಮ, 8th ಕ್ರಾಸ್, BEML ಲೆಔಟ್ 1st ಸ್ಟೇಜ್ ಓಮ್ ಶಕ್ತಿ ಟೆಂಪಲ್‌, ಬಸವೇಶ್ವರ ನಗರ, ಬೆಂಗಳೂರು
Phone: 8968673685

Synopsys

ಲೇಖಕ ಗುರು ಸಕಲಮಾ ಅವರು ಚದುರಿದ ಚಿತ್ರಗಳಂತಿದ್ದ ಅನುಭವಗಳನ್ನು ಕ್ರೋಡಿಕರಿಸಿ ಒಂದು ಪುಸ್ತಕ ರೂಪಕ್ಕೆ ತಂದು ಬರೆದಿರುವ ಕೃತಿಯೇ “ಹಿಮಾಲಯ ಋಷಿಗಳ ದಿವ್ಯ ಸಂದೇಶಗಳು “ಸಕಾಲಿಕ ಮತ್ತು ಕಾಲತೀತ. ಇವರು ಕಲೆ ಹಾಕಿರುವ ಮೂರು ದಶಕಗಳಿಗೂ ಅಧಿಕ ಅವಧಿಯ ಅಧ್ಯಾತ್ಮಿಕ ಅನುಭವ ಕಮಲಪುಷ್ಪ-1,2 ಹೀಗೆ 9 ವಿಭಾಗವಾಗಿ ವಿಂಗಡಿಸಿದ್ದು, ಸರಿ ಸುಮಾರು 300 ಪುಟಗಳಿಂದ ಹೊರ ಹೊಮ್ಮಿದೆ. ದೇಹ ಅಳಿದು ಹಲವು ವರ್ಷಗಳಾದರೂ ನೆನೆದಾಗ ಕಾಣಿಸಿಕೊಂಡು ಮಾರ್ಗದರ್ಶನ ಮಾಡುವ ಹಿಮಾಲಯದ ಯೋಗಿ ಸ್ವಾಮಿ ರಾಮ. ತಮಿಳುನಾಡಿನ ಪ್ರಾಚೀನ ದೇವಾಲಯದಲ್ಲಿ ಕಾಣಿಸಿಕೊಂಡು ಆಧ್ಯಾತ್ಮಿಕ ರಹಸ್ಯಪಥ ಚಂದ್ರವಿದ್ಯೆಯ ಕುರುಹು ತೋರಿದ ಋಷಿ ಅಗಸ್ಯರು. ರೈಲಿನಲ್ಲಿ ಕಾಣಿಸಿಕೊಂಡು ಎಚ್ಚರಿಸಿದ ಪರಮಹಂಸ ಯೋಗಾನಂದರು. ಕೋಪವಿಲ್ಲದ ಕರುಣಾಮೂರ್ತಿಯಾಗಿ ಕಾಣಿಸಿಕೊಳ್ಳುವ ಅತ್ರಿನಂದನ ಮುನಿ ದುರ್ವಾಸರು. ಅಕ್ಷರಶಃ ರುಂಡ ಕಡಿದ ಅನುಭವ ದಯಪಾಲಿಸುವ ಛಿನ್ನಮಸ್ತಾ ದೇವಿಯ ರಹಸ್ಯ-ಹೀಗೆ ಮೈ ನವಿರೇಳಿಸುವ ಆಧ್ಯಾತ್ಮಿಕ ಅನುಭವಗಳು ಈ ಕೃತಿಯಲ್ಲಿ ಸಾಲುಗಟ್ಟಿ ಬರುತ್ತವೆ.ಆಧ್ಯಾತ್ಮದಲ್ಲಿ ಆಸಕ್ತಿ ಉಳ್ಳವರು,ಗೃಹಿಣಿಯರು,ಹಿರಿಯರು ಓದುವಂತಹ ಪುಸ್ತಕ ಇದಾಗಿದೆ.

About the Author

ಗುರು ಸಕಲಮಾ

ಮಹಾನ್ ಯೋಗಿನಿ ಗುರು ಸಕಲಮಾ ಅವರು ಆಧ್ಯಾತ್ಮಿಕ ಗುರುಗಳಾಗಿ ಪ್ರಸಿದ್ಧರು. ಇವರ ಮೂಲ ಹೆಸರು ಜ್ಯೋತಿ ಪಟ್ಟಾಭಿರಾಮ್‌. ಮೂಲತಃ  ಶಿವಮೊಗ್ಗ ಜಿಲ್ಲೆಯ ಸಾಗರದವರು. ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಇಂಗ್ಲೀಷ್‌ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿರುವ ಸಕಲಮಾ ಅವರು ಭರತನಾಟ್ಯ ಗುರುವಾಗಿ ಸಾವಿರಾರು ಮಂದಿ ಶಿಷ್ಯರಿಗೆ ನಾಟ್ಯಕಲೆಯ ಪಾಠ ಮಾಡಿದ್ದರು. ನಂತರದಲ್ಲಿ ಆಧ್ಯಾತ್ಮಿಕತೆಯತ್ತ ತಮ್ಮ ಚಿತ್ತವನ್ನು ಹೊರಳಿಸಿ, ಹಿಮಾಲಯದ ಸ್ವಾಮಿ ರಾಮ ಮತ್ತು ಮೈಸೂರಿನ ಡಾ. ರಾ ಸತ್ಯನಾರಾಯಣ ಅವರ ನೇರ ಶಿಷ್ಯರಾದರು. ಪ್ರಸ್ತುತ ಸಕಲಮಾ ಅವರು ಆಧ್ಯಾತ್ಮಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಅವರು ಮಂತ್ರ ದೀಕ್ಷೆಗಳು, ಹಿಮ್ಮೆಟ್ಟುವಿಕೆಗಳು, ಕಾರ್ಯಾಗಾರಗಳು ಮತ್ತು ವೈಯಕ್ತಿಕ ಮಾರ್ಗದರ್ಶನದ ಅವಧಿಗಳ ಮೂಲಕ ಪ್ರಪಂಚದಾದ್ಯಂತ ಅನ್ವೇಷಕರು ಮತ್ತು ಅವರ ಶಿಷ್ಯರಿಗೆ ...

READ MORE

Related Books