ಸ್ವಾಮಿ ನಿತ್ಯಸ್ಥಾನಂದ ಅವರು ಬರೆದ ಕೃತಿ-ಪರಿಪೂರ್ಣ ವ್ಯಕ್ತಿತ್ವ. ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಕುರಿತು ಸುಲಭವಾಗಿ ಹೇಳ ಬರುವಂತಿಲ್ಲ. ಸಾಮಾನ್ಯ ವ್ಯಕ್ತಿತ್ವ ಮೀರಿದ ಪರಿಪೂರ್ಣ ವ್ಯಕ್ತಿತ್ವ ಕುರಿತು ಊಹಿಸಲೂ ಆಸಾಧ್ಯ. ಇಂತಹ ಪರಿಪೂರ್ಣ ವ್ಯಕ್ತಿತ್ವವು ಹತ್ತು ಹಲವು ವಿಶೇಷತೆಗಳನ್ನು ಒಳಗೊಂಡಿರುತ್ತವೆ. ಮೇಲ್ನೋಟಕ್ಕೆ ಕಾಣುವ ಲಕ್ಷಣಗಳು ಇವಲ್ಲ. ಅಂತರಂಗಕ್ಕೆ ಕಾಣುವ ಸೂಕ್ಷ್ಮ ಅಂಶಗಳಿವು. ಇವುಗಳನ್ನು ಮಾನದಂಡವಾಗಿಸಿ ಕಂಡುಕೊಂಡ ಅಂಶಗಳನ್ನು ಆಧರಿಸಿ, ವ್ಯಕ್ತಿತ್ವದ ಪರಿಪೂರ್ಣತೆ ಕುರಿತು ಮಾತನಾಡಬೇಕಾಗುತ್ತದೆ. ಆಗಲೇ ಬದುಕಿನ ಸಾರ್ಥಕತೆ. ಇಂತಹ ಮಾಹಿತಿಪೂರ್ಣ ವಿಷಯಗಳನ್ನು ಒಳಗೊಂಡ ಕೃತಿ.
©2025 Book Brahma Private Limited.