ಡಾ. ಅಂಬೇಡ್ಕರ್ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆದು ಶಿಕ್ಷಕಿಯಾಗಿ, ಶಿಕ್ಷಣಾಧಿಕಾರಿಯಾಗಿ ಎದುರಾದ ಅಡೆತಡೆಗಳನ್ನು ಸಮರ್ಥವಾಗಿ ಎದುರಿಸಿ ಸಾರ್ಥಕತೆಯನ್ನು ಪಡೆದ ದಲಿತ ಹೆಣ್ಣು ಮಗಳಾದ ಶಾಂತಾಬಾಯಿ ಕಾಂಬಳೆ ಅವರ ಆತ್ಮಕಥೆ ಇದು. ಎಲ್ಲರಿಗೂ, ಅದರಲ್ಲಿಯೂ ದಲಿತ ಹೆಣ್ಣುಮಕ್ಕಳಿಗೆ ಆತ್ಮವಿಶ್ವಾಸ ತುಂಬುವಂತಹ ಕಥಾನಕ ಇದು.
ಶಿಕ್ಷಕಿಯಾಗಿರುವುದು ಕೇವಲ ಹೊಟ್ಟೆಪಾಡಿಗಾಗಿ ಅಲ್ಲ. ಬದಲಿಗೆ ಗ್ರಾಮೀಣ ಪ್ರದೇಶದ ಮಕ್ಕಳು ಸಾಕಷ್ಟು ವಿದ್ಯೆಯನ್ನು ಕಲಿಯಲಿ ಎಂಬ ಅವರ ಹಂಬಲಸಾರ್ಥಕತೆ ಕಂಡುಕೊಂಡಿತು. ಈ ಕೃತಿ ಮರಾಠಿಯಿಂದ ಇಂಗ್ಲಿಷ್ ಗೆ ಮತ್ತು ಫ್ರೆಂಚ್ ಭಾಷೆಗೆ ಅನುವಾದಗೊಂಡಿದೆ. ಚಂದ್ರಕಾಂತ ಪೋಕಳೆ ಯವರು ಈ ಕೃತಿಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
©2025 Book Brahma Private Limited.