ಡಾ. ಸಿ. ಓಂಕಾರಪ್ಪ ಅವರ ಕೃತಿ-ಕುಮಾರವ್ಯಾಸ ಭಾರತ. ಈ ಕೃತಿಯಲ್ಲಿಯ ಭಾಷೆಯನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿದ ಗ್ರಂಥ. ಮಹಾಭಾರತವನ್ನು ಯಾರೂ ಬೇಕಾದರೂ ಯಾವ ದೃಷ್ಟಿಯಿಂದ ವಿಶ್ಲೇಷಣೆಗೆ ಒಳಪಡಿಸಿದ್ದರೂ ಅದು ತನ್ನ ಘನತೆಯನ್ನು ಕುಂದಿಸಿಕೊಳ್ಳಲಾರದು. ಜೀವನ ಮೌಲ್ಯಗಳನ್ನೇ ಎತ್ತಿ ಹಿಡಿಯುತ್ತದೆ. ವಾಸ್ತವತೆಯನ್ನು ತೋರುತ್ತದೆ. ಅಲ್ಲಿಯ ಭಾಷೆಯು ಸನ್ನಿವೇಶದ, ಪಾತ್ರಗಳ, ಜೀವನ ಉದ್ದೇಶಗಳ, ವರ್ತನೆಯ ಮೂಲ ಕಾರಣಗಳ ಹಾಗೂ ಪರಿಣಾಮಗಳ ಸುಂದರ ಚಿತ್ರಣಕ್ಕೆ ಸಾಕಷ್ಟು ಸಾಮಗ್ರಿ ಒದಗಿಸುತ್ತದೆ.
©2025 Book Brahma Private Limited.