ಕೃತಿಯ ಆರಂಭದಲ್ಲಿ ಮಹಿಳೆಯ ಮೇಲೆ ಹೇಗೆ ಹಂತಹಂತ ವಾಗಿ ಧರ್ಮದ ಹೆಸರಲ್ಲಿ ಕಾನೂನುಗಳು ಹೇರಲಾಯಿತು ಎನ್ನುವುದನ್ನು ಗುರುತಿಸಲಾಗಿದ್ದು, ಋಗ್ವದ ಕಾಲದಲ್ಲಿ ಮಹಿಳೆಯರಿಗಿದ್ದ ಹಕ್ಕುಗಳ ಬಗ್ಗೆಯೂ ಪ್ರಸ್ತಾಪಿಸುತ್ತಾರೆ. ಗೌತಮನ ಅನಂತರ ಬಂದ ಬೌದ್ಧಯಾನ ನಿಂದಲೂ ಮಹಿಳೆಯರ ಬದುಕು ನಿಕೃಷ್ಟವಾಯಿತು ಎಂದು ಲೇಖಕರು ಹೇಳುತ್ತಾರೆ. ಬೌದ್ಧಯಾನ ಬಹುಪತ್ನಿತ್ವವನ್ನು ಬೆಂಬಲಿಸುತ್ತಿದ್ದ. ಇವನ ದೃಷ್ಟಿಯಲ್ಲಿ ಹೆಣ್ಣು ಮಕ್ಕಳನ್ನು ಹೆತ್ತ ಕಾರಣಕ್ಕಾಗಿಯೇ ಪತ್ನಿಯನ್ನು ತೊರೆಯುವ ಅವಕಾಶ ಪತಿಗಿತ್ತು, ಪುರಾತನ ಕಾಲದಲ್ಲಿ ಬೇರೆ ಬೇರೆ ಮಹರ್ಷಿಗಳ ಮೂಲಕ ಹೆಣ್ಣಿನ ಬದುಕಿನಲ್ಲಿ ಆದ ಏರುಪೇರುಗಳನ್ನು ಗುರುತಿಸುತ್ತಾರೆ. ಎರಡನೆ ಅಧ್ಯಾಯದಲ್ಲಿ ಭಾರತದಲ್ಲಿ ಮಹಿಳಾ ಚಳವಳಿಯ ಉಗಮದ ಹಿಂದಿರುವ ಬೇರೆ ಬೇರೆ ರಾಜಕೀಯ ಕಾರಣಗಳನ್ನು ಈ ಕೃತಿ ವಿವರಿಸುತ್ತದೆ.
©2025 Book Brahma Private Limited.